ಕೊಪ್ಪಳ:ಜಿಲ್ಲೆಯಲ್ಲಿ ಕೋವಿಡ್-19ಗೆ ಶುಕ್ರವಾರ3 ಜನರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
194ಜನರಿಗೆ ಸೋಂಕು ಇರುವುದು ಪತ್ತೆ ಮಾಡಲಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ 87, ಕೊಪ್ಪಳದಲ್ಲಿ 44, ಕುಷ್ಟಗಿಯಲ್ಲಿ 33, ಯಲಬುರ್ಗಾದಲ್ಲಿ30 ಪ್ರಕರಣ ಪತ್ತೆಯಾಗಿದೆ. 48 ಜನರನ್ನು ತೀವ್ರ ಸೋಂಕಿನ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.
209ಜನರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 8610 ಪ್ರಕರಣ ವರದಿಯಾಗಿದ್ದು, ಇಲ್ಲಿಯವರೆಗೆ 6448ಜನರು ಗುಣಮುಖರಾಗಿದ್ದಾರೆ. ಸಾಮೂಹಿಕ ಕೋವಿಡ್-19 ಪರೀಕ್ಷೆ ಚುರುಕುಗೊಳಿಸಿದ್ದು, ಹೋಬಳಿಮಟ್ಟದಲ್ಲಿ ಸಂಚಾರಿ ವಾಹನಗಳು ಕಾರ್ಯ ನಿರ್ವಹಿಸುತ್ತವೆ.