<p>ಗಂಗಾವತಿ: ‘ಕೊರೊನಾ ಸೋಂಕಿಗೆ ಲಸಿಕೆಯೇ ಪರಿಹಾರ. ನಾವೆಲ್ಲ ಆರೋಗ್ಯವಾಗಿದ್ದರೆ ಸಕಲವೂ ಕ್ಷೇಮವಾಗಿರುತ್ತದೆ’ ಎಂದು ಪ್ರಾಚಾರ್ಯೆ ಲಲಿತಾ ಬಾವಿಕಟ್ಟಿ ಹೇಳಿದರು.</p>.<p>ನಗರದ ಎಚ್.ಆರ್.ಶ್ರೀರಾಮುಲುಕಾಲೇಜಿನಲ್ಲಿ ಕೋವಿಡ್ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.</p>.<p>ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿ ಇದೆ. ಸರ್ಕಾರದ ಆದೇಶದಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ಪ್ರಶಂಸನೀಯ ಎಂದರು.</p>.<p>ಕೊರೊನಾ ತಡೆಗಟ್ಟಲು ಅವರಿಗೆ ಸಹಕರಿಸುವುದರ ಮೂಲಕ ನಾವೆಲ್ಲ ಸದೃಢ ರಾಷ್ಟ್ರದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.</p>.<p>ಆರೋಗ್ಯಾಧಿಕಾರಿ ಡಾ.ರಮೇಶ ದರೋಜಿ ಮತ್ತು ಆರೋಗ್ಯ ಸಹಾಯಕಿಯರಾದ ಸರಸ್ವತಿ, ಹನುಂತಮ್ಮ ಅವರನ್ನು ಕಾಲೇಜಿನ ವತಿಯಿಂದ ಪ್ರಾಚಾರ್ಯರು ಸನ್ಮಾನಿಸಿದರು. ಡಾ.ವಿಜಯಾನಂದ ವಗ್ಗೆ, ವಿರುಪಾಕ್ಷಪ್ಪ ಕಲಕೇರಿ, ಇಂದಿರಾ,ವಿನಯ್, ಹನುಮಂತಪ್ಪ, ರಮೇಶ ಪೂಜಾರ, ದೊಡ್ಡಬಸಮ್ಮ, ಸಾಯಿಕುಮಾರ ಹಾಗೂ ವಿನಾಯಕ ಇದ್ದರು.</p>.<p>ಗುಂಡೂರು ಪವನ್ ಕುಮಾರ್ ಅವರು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ‘ಕೊರೊನಾ ಸೋಂಕಿಗೆ ಲಸಿಕೆಯೇ ಪರಿಹಾರ. ನಾವೆಲ್ಲ ಆರೋಗ್ಯವಾಗಿದ್ದರೆ ಸಕಲವೂ ಕ್ಷೇಮವಾಗಿರುತ್ತದೆ’ ಎಂದು ಪ್ರಾಚಾರ್ಯೆ ಲಲಿತಾ ಬಾವಿಕಟ್ಟಿ ಹೇಳಿದರು.</p>.<p>ನಗರದ ಎಚ್.ಆರ್.ಶ್ರೀರಾಮುಲುಕಾಲೇಜಿನಲ್ಲಿ ಕೋವಿಡ್ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.</p>.<p>ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿ ಇದೆ. ಸರ್ಕಾರದ ಆದೇಶದಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ಪ್ರಶಂಸನೀಯ ಎಂದರು.</p>.<p>ಕೊರೊನಾ ತಡೆಗಟ್ಟಲು ಅವರಿಗೆ ಸಹಕರಿಸುವುದರ ಮೂಲಕ ನಾವೆಲ್ಲ ಸದೃಢ ರಾಷ್ಟ್ರದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.</p>.<p>ಆರೋಗ್ಯಾಧಿಕಾರಿ ಡಾ.ರಮೇಶ ದರೋಜಿ ಮತ್ತು ಆರೋಗ್ಯ ಸಹಾಯಕಿಯರಾದ ಸರಸ್ವತಿ, ಹನುಂತಮ್ಮ ಅವರನ್ನು ಕಾಲೇಜಿನ ವತಿಯಿಂದ ಪ್ರಾಚಾರ್ಯರು ಸನ್ಮಾನಿಸಿದರು. ಡಾ.ವಿಜಯಾನಂದ ವಗ್ಗೆ, ವಿರುಪಾಕ್ಷಪ್ಪ ಕಲಕೇರಿ, ಇಂದಿರಾ,ವಿನಯ್, ಹನುಮಂತಪ್ಪ, ರಮೇಶ ಪೂಜಾರ, ದೊಡ್ಡಬಸಮ್ಮ, ಸಾಯಿಕುಮಾರ ಹಾಗೂ ವಿನಾಯಕ ಇದ್ದರು.</p>.<p>ಗುಂಡೂರು ಪವನ್ ಕುಮಾರ್ ಅವರು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>