<p><strong>ಕುಷ್ಟಗಿ:</strong> ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಕೃಷ್ಣಗಿರಿ ಕಾಲೊನಿಯಲ್ಲಿ ಮಂಗಳವಾರ ನಡೆದಿದೆ.</p>.<p>ಯಮನೂರಪ್ಪ ಹನುಮಂತಪ್ಪ ಸಂಗಟಿ (15) ಮೃತ ಬಾಲಕ.</p>.<p>ಶಾಂತಲಿಂಗಪ್ಪ ಸೂಡಿ ಎಂಬುವವರಿಗೆ ಸೇರಿದ ಶಿವು ಪೇಪರ್ ಪ್ಲೇಟ್ ಮೇಕರ್ಸ್ ಘಟಕದಲ್ಲಿ ಈ ಬಾಲಕ ಕೆಲಸ ಮಾಡುತ್ತಿದ್ದ. ಯಂತ್ರಕ್ಕೆ ಅಳವಡಿಸಿದ ವಿದ್ಯುತ್ ಪ್ರವಹಿಸುತ್ತಿದ್ದ ವೈರ್ ತಾಗಿ ಅಸ್ವಸ್ಥಗೊಂಡಿದ್ದ. ಅಲ್ಲಿಯೇ ಇದ್ದ ಆತನ ಸಹೋದರ ಕೂಡಲೇ ಆತನನ್ನು ಕರೆದೊಯ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಾಲಕ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು.</p>.<p>ಕೆಲಸದ ವೇಳೆ ಮಾಲೀಕರು ಬಾಲಕನಿಗೆ ಯಾವುದೇ ಜೀವರಕ್ಷಕ ಸಲಕರಣೆ ಒದಗಿಸಿರಲಿಲ್ಲ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಾಲಕನ ದೊಡ್ಡಪ್ಪ ದುರಗಪ್ಪ ಸಂಗಟಿ ಎಂಬುವವರು ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಬಡ ಕುಟುಂಬಕ್ಕೆ ಸೇರಿದ ಈ ಬಾಲಕ ಕೆಲ ದಿನಗಳಿಂದ ತನ್ನ ಅಕ್ಕ, ಅಣ್ಣನೊಂದಿಗೆ ಪೇಪರ್ ಪ್ಲೇಟ್ ಘಟಕಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಆಸ್ಪತ್ರೆ ಬಳಿ ಮೃತ ಬಾಲಕನ ಪಾಲಕರು ಮತ್ತು ಸಂಬಂಧಿಕರ ರೋದನ ಸುತ್ತಲಿನ ಜನರ ಕಣ್ಣಾಲೆಗಳನ್ನು ತೇವಗೊಳಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಕೃಷ್ಣಗಿರಿ ಕಾಲೊನಿಯಲ್ಲಿ ಮಂಗಳವಾರ ನಡೆದಿದೆ.</p>.<p>ಯಮನೂರಪ್ಪ ಹನುಮಂತಪ್ಪ ಸಂಗಟಿ (15) ಮೃತ ಬಾಲಕ.</p>.<p>ಶಾಂತಲಿಂಗಪ್ಪ ಸೂಡಿ ಎಂಬುವವರಿಗೆ ಸೇರಿದ ಶಿವು ಪೇಪರ್ ಪ್ಲೇಟ್ ಮೇಕರ್ಸ್ ಘಟಕದಲ್ಲಿ ಈ ಬಾಲಕ ಕೆಲಸ ಮಾಡುತ್ತಿದ್ದ. ಯಂತ್ರಕ್ಕೆ ಅಳವಡಿಸಿದ ವಿದ್ಯುತ್ ಪ್ರವಹಿಸುತ್ತಿದ್ದ ವೈರ್ ತಾಗಿ ಅಸ್ವಸ್ಥಗೊಂಡಿದ್ದ. ಅಲ್ಲಿಯೇ ಇದ್ದ ಆತನ ಸಹೋದರ ಕೂಡಲೇ ಆತನನ್ನು ಕರೆದೊಯ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಾಲಕ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು.</p>.<p>ಕೆಲಸದ ವೇಳೆ ಮಾಲೀಕರು ಬಾಲಕನಿಗೆ ಯಾವುದೇ ಜೀವರಕ್ಷಕ ಸಲಕರಣೆ ಒದಗಿಸಿರಲಿಲ್ಲ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಾಲಕನ ದೊಡ್ಡಪ್ಪ ದುರಗಪ್ಪ ಸಂಗಟಿ ಎಂಬುವವರು ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಬಡ ಕುಟುಂಬಕ್ಕೆ ಸೇರಿದ ಈ ಬಾಲಕ ಕೆಲ ದಿನಗಳಿಂದ ತನ್ನ ಅಕ್ಕ, ಅಣ್ಣನೊಂದಿಗೆ ಪೇಪರ್ ಪ್ಲೇಟ್ ಘಟಕಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಆಸ್ಪತ್ರೆ ಬಳಿ ಮೃತ ಬಾಲಕನ ಪಾಲಕರು ಮತ್ತು ಸಂಬಂಧಿಕರ ರೋದನ ಸುತ್ತಲಿನ ಜನರ ಕಣ್ಣಾಲೆಗಳನ್ನು ತೇವಗೊಳಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>