ಸದ್ಯ ಇಲ್ಲಿ ಅರ್ಚಕರಾಗಿರುವ ಹನುಮಂತಪ್ಪ ಗುಜ್ಜಲ 24 ವರ್ಷಗಳಿಂದ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ವಿಶಾಲ ದೇವಾಲಯದ ಅವರಣದಲ್ಲಿ ನವಗ್ರಹ, ಆಂಜನೇಯ, ಈಶ್ವರ, ದತ್ತಾತ್ರೇಯ, ಇಟಗಿ ಭೀಮಾಂಬಿಕಾ ದೇವಿ ಮತ್ತು ವಾಲ್ಮೀಕಿ ಸಣ್ಣ ದೇವಾಲಯಗಳು ನಿರ್ಮಾಣಗೊಂಡವು ಎಂದು ತಿಳಿದು ಬರುತ್ತದೆ. ಶುಕ್ರವಾರ ದೇವಸ್ಥಾನದಲ್ಲಿ ಸಹಸ್ರ ಮೋದಕ ಗಣಹೋಮ, ನವಗ್ರಹ ಹೋಮ, ರುದ್ರ ಸ್ವಾಹಕಾರ, ದತ್ತ ಗಾಯತ್ರಿ ಮತ್ತು ಪವನ ಹೋಮ ಶ್ರದ್ಧಾಭಕ್ತಿಯಿಂದ ನೆರವೇರಿದವು. ದೇವರಿಗೆ ವಸ್ತ್ರಾಲಂಕಾರ ಮತ್ತು ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.