<p>ಹನುಮಸಾಗರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡ ಕಾರಣ ಚರಂಡಿ ನೀರು ಶಾಲಾ ಆವರಣದ ಕಡೆ ಹರಿಯುತ್ತಿತ್ತು. ಶನಿವಾರ ಇದನ್ನು ಕಂಡ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ ಹಾಗೂ ಅಧ್ಯಕ್ಷೆ ಶಂಕ್ರಮ್ಮನವರ ಮಗ ಕಳಕಪ್ಪ ಚರಂಡಿ ಸ್ವಚ್ಛಗೊಳಿಸಿದರು.</p>.<p>ಶುಕ್ರವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಚರಂಡಿಗೆ ತ್ಯಾಜ್ಯ ಹರಿದುಬಂದಿದೆ. ಕೊಳಚೆ ನೀರು ಹರಿಯುವ ಕೊಳವೆ ಸಣ್ಣದಾಗಿದೆ. ಆದ್ದರಿಂದ ನೀರು ಶಾಲಾ ಆವರಣದತ್ತ ಹರಿಯುತ್ತಿತ್ತು.</p>.<p>ಅದೇ ಮಾರ್ಗದಲ್ಲಿ ಹೊರಟಿದ್ದ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ ಸ್ವತಃ ಕೊಳವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ತ್ಯಾಜ್ಯವನ್ನೆಲ್ಲ ಸ್ವಚ್ಛಗೊಳಿಸಿ ಶಾಲಾ ಆವರಣದತ್ತ ಹರಿಯುತ್ತಿದ್ದ ನೀರನ್ನು ನಿಯಂತ್ರಿಸಿದರು.</p>.<p>‘ಜನಸೇವಕರು ಅಂದ್ರ ಎಲ್ಲದಕ್ಕೂ ಸಿದ್ಧ ಇರಬೇಕ್ರಿ, ಅಲ್ಲದೆ ಇದು ನಮ್ಮೂರ ಹೆಮ್ಮೆಯ ಶಾಲೆ’ ಎಂದರು.</p>.<p>‘ಸ್ವಚ್ಛತೆಗಾಗಿ ಸಣ್ಣ ಕೆಲಸ ಮಾಡಲು ಕೀಳಿರಿಮೆ ಇರಬಾರದು. ಇದೇ ರೀತಿ ಸಾರ್ವಜನಿಕರು ಮಳೆಗಾಲದಲ್ಲಿ ಚರಂಡಿಗೆ ತ್ಯಾಜ್ಯ ಕುಳಿತು ನೀರು ಹರಿಯದಂತಾದಾಗ ಗ್ರಾ.ಪಂ ಸಿಬ್ಬಂದಿಯನ್ನೇ ಕಾಯುತ್ತ ಕುಳಿತುಕೊಳ್ಳುವುದರ ಬದಲು ಎಲ್ಲರೂ ಈ ಕೆಲಸಕ್ಕೆ ಮುಂದಾಗಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನುಮಸಾಗರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡ ಕಾರಣ ಚರಂಡಿ ನೀರು ಶಾಲಾ ಆವರಣದ ಕಡೆ ಹರಿಯುತ್ತಿತ್ತು. ಶನಿವಾರ ಇದನ್ನು ಕಂಡ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ ಹಾಗೂ ಅಧ್ಯಕ್ಷೆ ಶಂಕ್ರಮ್ಮನವರ ಮಗ ಕಳಕಪ್ಪ ಚರಂಡಿ ಸ್ವಚ್ಛಗೊಳಿಸಿದರು.</p>.<p>ಶುಕ್ರವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಚರಂಡಿಗೆ ತ್ಯಾಜ್ಯ ಹರಿದುಬಂದಿದೆ. ಕೊಳಚೆ ನೀರು ಹರಿಯುವ ಕೊಳವೆ ಸಣ್ಣದಾಗಿದೆ. ಆದ್ದರಿಂದ ನೀರು ಶಾಲಾ ಆವರಣದತ್ತ ಹರಿಯುತ್ತಿತ್ತು.</p>.<p>ಅದೇ ಮಾರ್ಗದಲ್ಲಿ ಹೊರಟಿದ್ದ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ ಸ್ವತಃ ಕೊಳವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ತ್ಯಾಜ್ಯವನ್ನೆಲ್ಲ ಸ್ವಚ್ಛಗೊಳಿಸಿ ಶಾಲಾ ಆವರಣದತ್ತ ಹರಿಯುತ್ತಿದ್ದ ನೀರನ್ನು ನಿಯಂತ್ರಿಸಿದರು.</p>.<p>‘ಜನಸೇವಕರು ಅಂದ್ರ ಎಲ್ಲದಕ್ಕೂ ಸಿದ್ಧ ಇರಬೇಕ್ರಿ, ಅಲ್ಲದೆ ಇದು ನಮ್ಮೂರ ಹೆಮ್ಮೆಯ ಶಾಲೆ’ ಎಂದರು.</p>.<p>‘ಸ್ವಚ್ಛತೆಗಾಗಿ ಸಣ್ಣ ಕೆಲಸ ಮಾಡಲು ಕೀಳಿರಿಮೆ ಇರಬಾರದು. ಇದೇ ರೀತಿ ಸಾರ್ವಜನಿಕರು ಮಳೆಗಾಲದಲ್ಲಿ ಚರಂಡಿಗೆ ತ್ಯಾಜ್ಯ ಕುಳಿತು ನೀರು ಹರಿಯದಂತಾದಾಗ ಗ್ರಾ.ಪಂ ಸಿಬ್ಬಂದಿಯನ್ನೇ ಕಾಯುತ್ತ ಕುಳಿತುಕೊಳ್ಳುವುದರ ಬದಲು ಎಲ್ಲರೂ ಈ ಕೆಲಸಕ್ಕೆ ಮುಂದಾಗಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>