<p><strong>ಕೊಪ್ಪಳ:</strong> ‘ನಾಟಕ ಅತ್ಯಂತ ಪ್ರಾಚೀನವಾದ ಕಲೆ. ರಂಗಭೂಮಿ ಕಲಾವಿದರು ಈ ನಾಡಿನ ಸಂಪತ್ತು. ಲಲಿತ ಕಲೆಗಳಲ್ಲಿ ‘ನಾಟಕ’ ಒಂದಾಗಿದ್ದು, ಇದು ಕಾವ್ಯಕಲೆಗಿಂತಲೂ ಹೆಚ್ಚಿನ ಆನಂದವನ್ನು ನೀಡುತ್ತದೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.</p>.<p>ನಗರದ ಗದಗ ರಸ್ತೆಯ ಟಿ.ಎ.ಪಿ.ಎಂ.ಎಸ್. ಜಾಗದಲ್ಲಿ ಕೆ.ಬಿ.ಆರ್.ಡ್ರಾಮಾ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ‘ನಿದ್ದಿಗೆಡಿಶ್ಯಾಳ ಬಸಲಿಂಗಿ’ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅಂತೆಯೇ ‘ಕಾವೇಷು ನಾಟಕಂ ರಮ್ಯಂ’ ಎಂದು ಕರೆದಿದ್ದಾರೆ. ಕನ್ನಡ ಭಾಷೆಯ ಉಳಿವು, ಬೆಳವಣಿಗೆಯಲ್ಲಿ ಮತ್ತು ಸ್ವಾತಂತ್ರ್ಯ ಆಂದೋಲನದಲ್ಲಿ ರಂಗಭೂಮಿಯ ಪಾತ್ರ ವಿಶಿಷ್ಟವಾದುದಾಗಿದೆ. ನಾಟಕಗಳು ಜನರನ್ನು ಸುಂಸ್ಕೃತರನ್ನಾಗಿ ಮಾಡುತ್ತವೆ. ಅವುಗಳು ದುಃಖದಿಂದ ಕುಗ್ಗಿದವರಿಗೆ, ಸಂತೋಷದಿಂದ ಹಿಗ್ಗಿದವರಿಗೆ, ಶ್ರಮದಿಂದ ಬಳಲಿದವರಿಗೆ ಸಾಂತ್ವನ ನೀಡುತ್ತವೆ’ ಎಂದರು.</p>.<p>ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಚಿಂದೋಡಿ ಶ್ರೀಕಂಠೇಶ ಅವರು ಕೆ.ಬಿ.ಆರ್.ಡ್ರಾಮಾ ಕಂಪನಿಯ ಮಾಲೀಕರಾಗಿ, ನಟರಾಗಿ, ನಿರ್ದೇಶಕರಾಗಿ, ನಾಟಕ ರಚನೆಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಕ್ಕಳಾದ ಚಿಂದೋಡಿ ವಿಜಯಕುಮಾರ, ಚಿಂದೋಡಿ ಕಿಶೋರಕುಮಾರ ಸೇರಿದಂತೆ ಇಡೀ ಕುಟುಂಬವೇ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದೆ ಎಂದು ಹೇಳಿದರು.</p>.<p>ನಿಂಗಮ್ಮ ಸಂಗಣ್ಣ ಕರಡಿ, ಖುಷಿ ಗವಿಸಿದ್ಧಪ್ಪ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ಭಾಗೀರಥಿಬಾಯಿ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹೇಮಲತಾ ನಾಯಕ,ಸುನಂದಾ ಕೆ.ಪಂಡಿತ ಮಾತನಾಡಿದರು.</p>.<p>ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.</p>.<p>ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಧುರಾ ಕರಣಂ, ಚಿಂದೋಡಿ ಶ್ರೀಕಂಠೇಶ, ಚಿಂದೋಡಿ ಶಂಭುಲಿಂಗಪ್ಪ ಹಾಗೂ ಲಕ್ಷ್ಮಣ ಪೀರಗಾರಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ‘ನಾಟಕ ಅತ್ಯಂತ ಪ್ರಾಚೀನವಾದ ಕಲೆ. ರಂಗಭೂಮಿ ಕಲಾವಿದರು ಈ ನಾಡಿನ ಸಂಪತ್ತು. ಲಲಿತ ಕಲೆಗಳಲ್ಲಿ ‘ನಾಟಕ’ ಒಂದಾಗಿದ್ದು, ಇದು ಕಾವ್ಯಕಲೆಗಿಂತಲೂ ಹೆಚ್ಚಿನ ಆನಂದವನ್ನು ನೀಡುತ್ತದೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.</p>.<p>ನಗರದ ಗದಗ ರಸ್ತೆಯ ಟಿ.ಎ.ಪಿ.ಎಂ.ಎಸ್. ಜಾಗದಲ್ಲಿ ಕೆ.ಬಿ.ಆರ್.ಡ್ರಾಮಾ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ‘ನಿದ್ದಿಗೆಡಿಶ್ಯಾಳ ಬಸಲಿಂಗಿ’ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅಂತೆಯೇ ‘ಕಾವೇಷು ನಾಟಕಂ ರಮ್ಯಂ’ ಎಂದು ಕರೆದಿದ್ದಾರೆ. ಕನ್ನಡ ಭಾಷೆಯ ಉಳಿವು, ಬೆಳವಣಿಗೆಯಲ್ಲಿ ಮತ್ತು ಸ್ವಾತಂತ್ರ್ಯ ಆಂದೋಲನದಲ್ಲಿ ರಂಗಭೂಮಿಯ ಪಾತ್ರ ವಿಶಿಷ್ಟವಾದುದಾಗಿದೆ. ನಾಟಕಗಳು ಜನರನ್ನು ಸುಂಸ್ಕೃತರನ್ನಾಗಿ ಮಾಡುತ್ತವೆ. ಅವುಗಳು ದುಃಖದಿಂದ ಕುಗ್ಗಿದವರಿಗೆ, ಸಂತೋಷದಿಂದ ಹಿಗ್ಗಿದವರಿಗೆ, ಶ್ರಮದಿಂದ ಬಳಲಿದವರಿಗೆ ಸಾಂತ್ವನ ನೀಡುತ್ತವೆ’ ಎಂದರು.</p>.<p>ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಚಿಂದೋಡಿ ಶ್ರೀಕಂಠೇಶ ಅವರು ಕೆ.ಬಿ.ಆರ್.ಡ್ರಾಮಾ ಕಂಪನಿಯ ಮಾಲೀಕರಾಗಿ, ನಟರಾಗಿ, ನಿರ್ದೇಶಕರಾಗಿ, ನಾಟಕ ರಚನೆಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಕ್ಕಳಾದ ಚಿಂದೋಡಿ ವಿಜಯಕುಮಾರ, ಚಿಂದೋಡಿ ಕಿಶೋರಕುಮಾರ ಸೇರಿದಂತೆ ಇಡೀ ಕುಟುಂಬವೇ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದೆ ಎಂದು ಹೇಳಿದರು.</p>.<p>ನಿಂಗಮ್ಮ ಸಂಗಣ್ಣ ಕರಡಿ, ಖುಷಿ ಗವಿಸಿದ್ಧಪ್ಪ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ಭಾಗೀರಥಿಬಾಯಿ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹೇಮಲತಾ ನಾಯಕ,ಸುನಂದಾ ಕೆ.ಪಂಡಿತ ಮಾತನಾಡಿದರು.</p>.<p>ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.</p>.<p>ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಧುರಾ ಕರಣಂ, ಚಿಂದೋಡಿ ಶ್ರೀಕಂಠೇಶ, ಚಿಂದೋಡಿ ಶಂಭುಲಿಂಗಪ್ಪ ಹಾಗೂ ಲಕ್ಷ್ಮಣ ಪೀರಗಾರಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>