ಗ್ರಾಮದಲ್ಲಿ ಸಾವಿರಕ್ಕೂ ಜನರು ವಾಸಿಸುತ್ತಿದ್ದು, ಇಂದಿರಾ ನಗರದಲ್ಲಿ ಕೃಷಿ ಕೂಲಿ ಕಾರ್ಮಿಕರು, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನೀರಿನ ನಲ್ಲಿಗೆ ಬೆಳಿಗ್ಗೆಯಿಂದಲೇ ಸರತಿಯಲ್ಲಿ ಇಟ್ಟು ಕಾಯುವಂತೆ ಆಗಿದೆ. ದಿನದಿಂದ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಲಾಕ್ಡೌನ್ ಕೂಡಾ ಜನರನ್ನು ಹೈರಾಣು ಮಾಡಿದೆ. ಕೃಷಿ ಕಾಯಕ್ಕೂ ಹೋಗದೇ ಬರುವ ನೀರಿಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.