ಗೋಪುರ ಬಸಪ್ಪ ಕಾಳು ಕಟ್ಟದ ತೆರೆ ತೋರಿಸುತ್ತಿರುವುದು
ಕೊಪ್ಪಳ ತಾಲ್ಲೂಕಿನ ಚಾಮಲಾಪುರ ಗ್ರಾಮಕ್ಕೆ ಹೋಗುವ ಹೊರವಲಯದಲ್ಲಿ ರೈತ ಬಾಲಪ್ಪ ಕನಕಪ್ಪ ಕೈಕೊಟ್ಟ ಸಜ್ಜೆ ತೋರಿಸಿದರು
ಇರುವ ಮೇವು ಉಳಿಸಿಕೊಳ್ಳಲು ಚಾಮಲಾಪುರದ ರೈತ ನಿಂಗಪ್ಪ ಕರಡಿ ಪರದಾಟ

ಎರಡು ಎಕರೆ ಹೊಲದಲ್ಲಿ ಮೆಕ್ಕಜೋಳ ಬಿತ್ತಿದ್ದೆ. ಮಳೆಯಿಲ್ಲದೇ ಎಲ್ಲವೂ ಒಣಗಿ ಹೋಗಿವೆ. ಬಿತ್ತನೆ ಬೀಜ ರಸಗೊಬ್ಬರಕ್ಕಾಗಿ ಖರ್ಚು ಮಾಡಿದ ಸಾವಿರಾರು ರೂಪಾಯಿಗೆ ಪ್ರತಿಯಾಗಿ ನಯಾಪೈಸೆಯೂ ಬಂದಿಲ್ಲ.
ವೀರೇಶ ಯಲಿಗಾರ ಇರಕಲ್ಲಗಡ
ನಮ್ಮದು ಒಣ ಬೇಸಾಯದ ಭೂಮಿ. ಕೇಂದ್ರ ಅಧ್ಯಯನ ತಂಡ ಪರಿಶೀಲಿಸಿದಾಗ ಬೆಳೆ ಹಸಿರಾಗಿತ್ತು. ಈಗ ಎಲ್ಲವೂ ಒಣಗಿ ಹೋಗಿದೆ. ಪರಿಹಾರ ಲಭಿಸುತ್ತದೆಯೊ ಇಲ್ಲವೊ ಎನ್ನುವ ಆತಂಕ ಕಾಡುತ್ತಿದೆ.
ನಿಂಗಪ್ಪ ಕರಡಿ ಚಾಮಲಾಪುರ
ಎರಡು ಎಕರೆಯಲ್ಲಿ ಸಜ್ಜೆ ಹಾಕಿದರೆ ಒಂದು ಪಾಕೆಟ್ ಮಾತ್ರ ಫಸಲು ಬಂದಿದೆ. ಊರಿನ ಸಮೀಪದಲ್ಲಿಯೇ ಇರುವ ಕೋಳಿ ಫಾರ್ಮ್ಗೆ ಕೆಲವರು ಕೆಲಸಕ್ಕೆ ಹೋದರೆ ಇನ್ನೂ ಕೆಲವರು ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ.
ಬಾಲಪ್ಪ ಕನಕಪ್ಪ ಚಾಮಲಾಪುರ