<p><strong>ಹನುಮಸಾಗರ:</strong> ವನಮಹೋತ್ಸವಕ್ಕಾಗಿ ಮೂರು ದಿನಗಳಿಂದ ತಯಾರಿ ನಡೆಸಿದ್ದ ಇಲ್ಲಿನ ಪ್ರಜ್ಞಾವಂತ ಯುವಕ ಸಂಘದ ಸದಸ್ಯರು ಶುಕ್ರವಾರ ಪಟ್ಟಣದ ವಿವಿಧ ಭಾಗಗಳಲ್ಲಿ ನೂರಾರು ಸಸಿಗಳನ್ನು ನಾಟಿ ಮಾಡುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿದರು.</p>.<p>ಕಾಲೇಜ್ ಪ್ರಾಚಾರ್ಯರಾದ ಬಸಮ್ಮ ಪಟೀಲ ಸಸಿ ನಾಟಿ ಮಾಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.</p>.<p>ತಂಡದಲ್ಲಿ ಕಾಲೇಜ್ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿದ್ದು, ಮೂರು ದಿನಗಳಿಂದ ವಿವಿಧ ಭಾಗದಲ್ಲಿ ಸಸಿ ನಾಟಿ ಮಾಡುವುದಕ್ಕಾಗಿ ತಗ್ಗು ತೆಗೆದಿದ್ದರು, ಕೆಲ ಯುವಕರು ನಾಟಿ ಮಾಡಲು ಬೇಕಾಗಿದ್ದ ಸಸಿಗಳನ್ನು ವಿವಿಧ ಭಾಗಗಳಿಂದ ಸಂಗ್ರಹಿಸಿಕೊಂಡು ಬಂದಿದ್ದರು.</p>.<p>‘ಸಸಿ ನಾಟಿ ಮಾಡುವುದಕ್ಕಾಗಿ ನಾವು ಯಾರ ಸಹಾಯ ಕೇಳದೆ ನಮ್ಮ ಸ್ವಂತ ಹಣ ಖರ್ಚು ಮಾಡಿ ವಿಶ್ವಪರಿಸರ ದಿನಾಚರಣೆ ಆಚರಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಅವಶ್ಯಕತೆ ಎಷ್ಟಿದೆ ಎಂಬುದು ನಮಗೂ ಗೊತ್ತಿದೆ‘ ಎಂದು ಯುವಕ ಪ್ರವೀಣ ಕೊರಡಕೇರಿ ಹೇಳಿದರು.</p>.<p>ಮುಸ್ತಾಫಾ ನಾಲಬಂದ್ ಮಾತನಾಡಿ, ‘ನಾವೆಲ್ಲರೂ ಒಂದೆ ಬ್ಯಾಚ್ನ ವಿದ್ಯಾರ್ಥಿಗಳಾಗಿದ್ದರಿಂದ ಈ ವರ್ಷ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದು ತೀರ್ಮಾನಿಸಿ ಈ ಪರಿಸರ ಕಾರ್ಯ ಮಾಡುತ್ತಿದ್ದೇವೆ‘ ಎಂದು ಹೇಳಿದರು.</p>.<p>‘ನಾಟಿ ಮಾಡಿದ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ನಮ್ಮಲ್ಲೆ ತಂಡಗಳನ್ನು ಮಾಡಿಕೊಂಡಿದ್ದೇವೆ, ಪ್ರತಿ ಒಂದು ತಂಡ ನಿತ್ಯ ಒಂದೊಂದು ಭಾಗಕ್ಕೆ ಹೋಗಿ ನೀರು ಹಾಕುವ ಕೆಲಸ ಮಾಡುತ್ತವೆ‘ ಎಂದು ಲೋಕೇಶ ಕುರ್ನಾಳ, ಕರಿಸಿದ್ದಪ್ಪ ಪಟ್ಟಣಶೆಟ್ಟಿ, ಪ್ರವೀಣ ಮೆಹರವಾಡೆ, ಮಂಜುನಾಥ ಮೋಟಗಿ ತಿಳಿಸಿದರು.</p>.<p>ಸುಮಾರು 50ಕ್ಕೂ ಹೆಚ್ಚು ಯುವಕರು ಈ ಕಾರ್ಯದಲ್ಲಿ ತೊಡಗಿದ್ದು ಪಟ್ಟಣದಲ್ಲಿ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.</p>.<p>ಮಹೇಶ ಧಲಬಂಜನ್, ಬಸು ನಾಲವಾಡ, ಮಂಜು ಹುಲ್ಲೂರ, ನಾಗರಾಜ ಬಿರಾದರ, ಸಿದ್ದು ಕೋಮಾರಿ, ವಿಷ್ಣು ಭಂಡಾರಿ, ರಹಿಮಾನ ಮೊಮಿನ್, ಭಾರ್ಗವ್ ಕೊಳ್ಳಿ, ಜಾವೀದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ವನಮಹೋತ್ಸವಕ್ಕಾಗಿ ಮೂರು ದಿನಗಳಿಂದ ತಯಾರಿ ನಡೆಸಿದ್ದ ಇಲ್ಲಿನ ಪ್ರಜ್ಞಾವಂತ ಯುವಕ ಸಂಘದ ಸದಸ್ಯರು ಶುಕ್ರವಾರ ಪಟ್ಟಣದ ವಿವಿಧ ಭಾಗಗಳಲ್ಲಿ ನೂರಾರು ಸಸಿಗಳನ್ನು ನಾಟಿ ಮಾಡುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿದರು.</p>.<p>ಕಾಲೇಜ್ ಪ್ರಾಚಾರ್ಯರಾದ ಬಸಮ್ಮ ಪಟೀಲ ಸಸಿ ನಾಟಿ ಮಾಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.</p>.<p>ತಂಡದಲ್ಲಿ ಕಾಲೇಜ್ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿದ್ದು, ಮೂರು ದಿನಗಳಿಂದ ವಿವಿಧ ಭಾಗದಲ್ಲಿ ಸಸಿ ನಾಟಿ ಮಾಡುವುದಕ್ಕಾಗಿ ತಗ್ಗು ತೆಗೆದಿದ್ದರು, ಕೆಲ ಯುವಕರು ನಾಟಿ ಮಾಡಲು ಬೇಕಾಗಿದ್ದ ಸಸಿಗಳನ್ನು ವಿವಿಧ ಭಾಗಗಳಿಂದ ಸಂಗ್ರಹಿಸಿಕೊಂಡು ಬಂದಿದ್ದರು.</p>.<p>‘ಸಸಿ ನಾಟಿ ಮಾಡುವುದಕ್ಕಾಗಿ ನಾವು ಯಾರ ಸಹಾಯ ಕೇಳದೆ ನಮ್ಮ ಸ್ವಂತ ಹಣ ಖರ್ಚು ಮಾಡಿ ವಿಶ್ವಪರಿಸರ ದಿನಾಚರಣೆ ಆಚರಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಅವಶ್ಯಕತೆ ಎಷ್ಟಿದೆ ಎಂಬುದು ನಮಗೂ ಗೊತ್ತಿದೆ‘ ಎಂದು ಯುವಕ ಪ್ರವೀಣ ಕೊರಡಕೇರಿ ಹೇಳಿದರು.</p>.<p>ಮುಸ್ತಾಫಾ ನಾಲಬಂದ್ ಮಾತನಾಡಿ, ‘ನಾವೆಲ್ಲರೂ ಒಂದೆ ಬ್ಯಾಚ್ನ ವಿದ್ಯಾರ್ಥಿಗಳಾಗಿದ್ದರಿಂದ ಈ ವರ್ಷ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದು ತೀರ್ಮಾನಿಸಿ ಈ ಪರಿಸರ ಕಾರ್ಯ ಮಾಡುತ್ತಿದ್ದೇವೆ‘ ಎಂದು ಹೇಳಿದರು.</p>.<p>‘ನಾಟಿ ಮಾಡಿದ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ನಮ್ಮಲ್ಲೆ ತಂಡಗಳನ್ನು ಮಾಡಿಕೊಂಡಿದ್ದೇವೆ, ಪ್ರತಿ ಒಂದು ತಂಡ ನಿತ್ಯ ಒಂದೊಂದು ಭಾಗಕ್ಕೆ ಹೋಗಿ ನೀರು ಹಾಕುವ ಕೆಲಸ ಮಾಡುತ್ತವೆ‘ ಎಂದು ಲೋಕೇಶ ಕುರ್ನಾಳ, ಕರಿಸಿದ್ದಪ್ಪ ಪಟ್ಟಣಶೆಟ್ಟಿ, ಪ್ರವೀಣ ಮೆಹರವಾಡೆ, ಮಂಜುನಾಥ ಮೋಟಗಿ ತಿಳಿಸಿದರು.</p>.<p>ಸುಮಾರು 50ಕ್ಕೂ ಹೆಚ್ಚು ಯುವಕರು ಈ ಕಾರ್ಯದಲ್ಲಿ ತೊಡಗಿದ್ದು ಪಟ್ಟಣದಲ್ಲಿ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.</p>.<p>ಮಹೇಶ ಧಲಬಂಜನ್, ಬಸು ನಾಲವಾಡ, ಮಂಜು ಹುಲ್ಲೂರ, ನಾಗರಾಜ ಬಿರಾದರ, ಸಿದ್ದು ಕೋಮಾರಿ, ವಿಷ್ಣು ಭಂಡಾರಿ, ರಹಿಮಾನ ಮೊಮಿನ್, ಭಾರ್ಗವ್ ಕೊಳ್ಳಿ, ಜಾವೀದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>