ಜಲಾಶಯ ತುಂಬಿದ ಬಳಿಕ ಹರಿಯುವ ಹೆಚ್ಚುವರಿ ನೀರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅದು ಬಳಕೆಯಾಗಲು ಬರುವಂತೆ ಇರಬೇಕು ಎನ್ನುವ ಬೇಡಿಕೆ ಇಲ್ಲಿನ ರೈತರದ್ದು. ಯಾಕೆಂದರೆ ಜಿಲ್ಲೆಯಲ್ಲಿ ಮೊದಲೆಲ್ಲ ಬರಗಾಲ ಕಾಡುತ್ತಿತ್ತು. ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ರೈತರು ನೀರಿಗಾಗಿ ಅನೇಕ ಬಾರಿ ಗುದ್ದಾಡಿದ ಉದಾಹರಣೆಗಳೂ ಇವೆ.