<p><strong>ಕಾರಟಗಿ</strong>: ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಹುಳಿಗಡಲೆ ಬೀಜಗಳ ವಿತರಣೆ ಆರಂಭಗೊಂಡಿದ್ದು, ಬೀಜ ಖರೀದಿಗೆ ರೈತರು ಮುಗಿಬಿದ್ದಿರುವುದು ಬುಧವಾರ ಕಂಡುಬಂತು. ಬೀಜ ಪಡೆದವರು ಖುಷಿಯಿಂದ ನಿರ್ಗಮಿಸುತ್ತಿದ್ದರೆ, ಉಳಿದವರು ತಮ್ಮ ಸರದಿಗೆ ಕಾಯುತ್ತಿರುವುದು ಕಂಡುಬಂತು.</p>.<p>ಕಡಲೆ ಬೀಜದ ಪ್ರತಿ ಚೀಲಕ್ಕೆ ಪರಿಶಿಷ್ಟ ಜಾತಿ, ಜನಾಂಗದವರಿಗೆ ₹950, ಇತರರಿಗೆ ₹1,250 ದರದಲ್ಲಿ ವಿತರಿಸಲಾಗುತ್ತಿದೆ. ಪ್ರತಿ ಎಕರೆಗೆ 1 ಚೀಲ ಬೀಜವನ್ನು ನೀಡಲಾಗುತ್ತಿದ್ದು, ಗರಿಷ್ಟ 5 ಎಕರೆ ಹೊಂದಿದ ಪ್ರತಿ ರೈತರಿಗೆ 5 ಚೀಲ ಬೀಜಗಳನ್ನು ವಿತರಿಸಲಾಗುತ್ತಿದೆ.</p>.<p>ಮಂಗಳವಾರ 1250 ಚೀಲ ಬೀಜ ಬಂದಿವೆ. ಗುರುವಾರ ಇನ್ನೂ 1 ಸಾವಿರ ಚೀಲ ಬೀಜಗಳು ಬರಲಿವೆ. ಎಲ್ಲಾ ರೈತರಿಗೂ ಟೋಕನ್ ನೀಡಿ ವಿತರಿಸಲಾಗುತ್ತಿದೆ. ರೈತರು ಧಾವಂತ ಪಡುವ ಪ್ರಮೇಯ ಬೇಡ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜ್, ಅಕ್ಷಯ್ ಭೇಟಿ ನೀಡಿದಾಗ ತಿಳಿಸಿದರು.</p>.<p>ಸ್ಥಳದಲ್ಲಿದ್ದ ರೈತರಾದ ಸಿದ್ದಲಿಂಗಪ್ಪ ನಾಲ್ಕೆತ್ತೀನ್, ಭೀಮಣ್ಣ ಹಂದ್ಯಾಳ, ಮಂಜುನಾಥ ತೆಕ್ಕಲಕೋಟೆ ಪ್ರತಿಕ್ರಿಯಿಸಿ, ಈಗ ಭೂಮಿ ತೇವಾಂಶದಿಂದ ಕೂಡಿದೆ. ಬಿತ್ತನೆಗೆ ಇದು ಸಕಾಲ. ವಿಳಂಬವಾದರೆ ಮಳೆಗೆ ಕಾಯಬೇಕು. ಬೀಜ ವಿತರಣೆ ತ್ವರಿತವಾಗಿ ಆಗಬೇಕು ಎಂದು ಆಗ್ರಹಿಸಿದರು.</p>.<p>ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಭಾಗದ ರೈತರಾದ ಸಿದ್ದನಗೌಡ ಖಂಡ್ರೆ, ಯಮನಪ್ಪ, ಪಂಪನಗೌಡ, ಪಂಪನಗೌಡ ರೈತರಿಗೆ ಸಕಾಲಕ್ಕೆ ಬೀಜ ವಿತರಿಸಿದರೆ ಅನುಕೂಲವಾಗುವುದು. ರೈತರಿಗೆ ಬೇಕಾದಷ್ಟು ಬೀಜಗಳನ್ನು ಪೂರೈಸಲು ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಹುಳಿಗಡಲೆ ಬೀಜಗಳ ವಿತರಣೆ ಆರಂಭಗೊಂಡಿದ್ದು, ಬೀಜ ಖರೀದಿಗೆ ರೈತರು ಮುಗಿಬಿದ್ದಿರುವುದು ಬುಧವಾರ ಕಂಡುಬಂತು. ಬೀಜ ಪಡೆದವರು ಖುಷಿಯಿಂದ ನಿರ್ಗಮಿಸುತ್ತಿದ್ದರೆ, ಉಳಿದವರು ತಮ್ಮ ಸರದಿಗೆ ಕಾಯುತ್ತಿರುವುದು ಕಂಡುಬಂತು.</p>.<p>ಕಡಲೆ ಬೀಜದ ಪ್ರತಿ ಚೀಲಕ್ಕೆ ಪರಿಶಿಷ್ಟ ಜಾತಿ, ಜನಾಂಗದವರಿಗೆ ₹950, ಇತರರಿಗೆ ₹1,250 ದರದಲ್ಲಿ ವಿತರಿಸಲಾಗುತ್ತಿದೆ. ಪ್ರತಿ ಎಕರೆಗೆ 1 ಚೀಲ ಬೀಜವನ್ನು ನೀಡಲಾಗುತ್ತಿದ್ದು, ಗರಿಷ್ಟ 5 ಎಕರೆ ಹೊಂದಿದ ಪ್ರತಿ ರೈತರಿಗೆ 5 ಚೀಲ ಬೀಜಗಳನ್ನು ವಿತರಿಸಲಾಗುತ್ತಿದೆ.</p>.<p>ಮಂಗಳವಾರ 1250 ಚೀಲ ಬೀಜ ಬಂದಿವೆ. ಗುರುವಾರ ಇನ್ನೂ 1 ಸಾವಿರ ಚೀಲ ಬೀಜಗಳು ಬರಲಿವೆ. ಎಲ್ಲಾ ರೈತರಿಗೂ ಟೋಕನ್ ನೀಡಿ ವಿತರಿಸಲಾಗುತ್ತಿದೆ. ರೈತರು ಧಾವಂತ ಪಡುವ ಪ್ರಮೇಯ ಬೇಡ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜ್, ಅಕ್ಷಯ್ ಭೇಟಿ ನೀಡಿದಾಗ ತಿಳಿಸಿದರು.</p>.<p>ಸ್ಥಳದಲ್ಲಿದ್ದ ರೈತರಾದ ಸಿದ್ದಲಿಂಗಪ್ಪ ನಾಲ್ಕೆತ್ತೀನ್, ಭೀಮಣ್ಣ ಹಂದ್ಯಾಳ, ಮಂಜುನಾಥ ತೆಕ್ಕಲಕೋಟೆ ಪ್ರತಿಕ್ರಿಯಿಸಿ, ಈಗ ಭೂಮಿ ತೇವಾಂಶದಿಂದ ಕೂಡಿದೆ. ಬಿತ್ತನೆಗೆ ಇದು ಸಕಾಲ. ವಿಳಂಬವಾದರೆ ಮಳೆಗೆ ಕಾಯಬೇಕು. ಬೀಜ ವಿತರಣೆ ತ್ವರಿತವಾಗಿ ಆಗಬೇಕು ಎಂದು ಆಗ್ರಹಿಸಿದರು.</p>.<p>ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಭಾಗದ ರೈತರಾದ ಸಿದ್ದನಗೌಡ ಖಂಡ್ರೆ, ಯಮನಪ್ಪ, ಪಂಪನಗೌಡ, ಪಂಪನಗೌಡ ರೈತರಿಗೆ ಸಕಾಲಕ್ಕೆ ಬೀಜ ವಿತರಿಸಿದರೆ ಅನುಕೂಲವಾಗುವುದು. ರೈತರಿಗೆ ಬೇಕಾದಷ್ಟು ಬೀಜಗಳನ್ನು ಪೂರೈಸಲು ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>