<p><strong>ಕುಷ್ಟಗಿ:</strong> ‘ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಜನಪದ ಸಂಸ್ಕೃತಿ ಉಳಿಸುವುದಕ್ಕೆ ಅನೇಕ ಕಲಾವಿದರು ಶ್ರಮಿಸುತ್ತಿದ್ದಾರೆ. ಆದರೆ ಎಲೆ ಮರೆ ಕಾಯಿಯಂತಿರುವ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ಬಿಜೆಪಿ ಮುಖಂಡ ಕಂದಕೂರಪ್ಪ ವಾಲ್ಮೀಕಿ ಹೇಳಿದರು.</p>.<p>ತಾಲ್ಲೂಕಿನ ನೆರಬೆಂಚಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮರ್ಥ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕೇವಲ ಸಿನಿಮಾ, ಟೆಲಿವಿಷನ್ ಕಾರ್ಯಕ್ರಮಗಳಿಗೆ ಮರುಳಾಗುತ್ತಿರುವುದರಿಂದ ಜನಪದ ಕಲೆ ನಶಿಸುತ್ತಿದೆ. ಜನಪದ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಆದರೂ ಇಂಥ ಕಾರ್ಯಕ್ರಮಗಳಿಂದಲಾದರೂ ಆ ಸಂಸ್ಕೃತಿಯ ಜೀವಂತಿಕೆಯ ಮೂಲ ಪರಂಪರೆಯನ್ನು ಉಳಿಸಲು ಸಾಧ್ಯವಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.</p>.<p>ಕಂದಕೂರ ಗ್ರಾಮ ಪಂಚಾಯಿತಿ ಸದಸ್ಯ ಸಲೀಂಸಾಬ್ ಟೆಂಗುಂಟಿ, ಮೋಹನಲಾಲ್ ಜೈನ್, ಉಮೇಶ ಹಿರೇಮಠ ಇತರರು ಜನಪದ ಕಾರ್ಯಕ್ರಮ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷೆ ಶಾಂತಮ್ಮ ತಳವಾರ, ಸದಸ್ಯರಾದ ಜಯಶ್ರೀ ಉಪ್ಪಲದಿನ್ನಿ, ಹನಮಗೌಡ ಗೌಡ್ರ, ಶೇಖಪ್ಪ ಮ್ಯಾಗಳಮನಿ ಉಪಸ್ಥಿತರಿದ್ದರು. ಜನಪದ ಕಲಾವಿದರಾದ ಬಸವರಾಜ ಉಪ್ಪಲದಿನ್ನಿ ಹಾಗೂ ಸಂಗಡಿಗರು ಜನಪದ ಸಂಗೀತ ನೆರವೇರಿಸಿದರು.</p>.<p>ಕಲಾವಿದರಾದ ಅಯ್ಯಪ್ಪ ಬಡಿಗೇರ, ಶರಣಪ್ಪ ಬನ್ನಿಗೊಳ, ಪವಾಡೆಪ್ಪ ಚೌಡ್ಕಿ, ಮಾನಪ್ಪ ಮಂಡಲಮರಿ, ಈರಪ್ಪ ತೋಟದ, ದೊಡ್ಡಪ್ಪ ಕೈಲವಾಡಗಿ, ಶೇಷಗಿರಿ ಸೋನಾರ, ನಬಿಸಾಬ ಕುಷ್ಟಗಿ, ಷರೀಫ್ ಸಾಬ್ ನದಾಫ್, ರಾಮನಗೌಡ ಪಾಟೀಲ, ಆನಂದ ಬಂಡಿಹಾಳ, ಈರನಗೌಡ ಪೋಲಿಸ್ ಪಾಟೀಲ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ‘ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಜನಪದ ಸಂಸ್ಕೃತಿ ಉಳಿಸುವುದಕ್ಕೆ ಅನೇಕ ಕಲಾವಿದರು ಶ್ರಮಿಸುತ್ತಿದ್ದಾರೆ. ಆದರೆ ಎಲೆ ಮರೆ ಕಾಯಿಯಂತಿರುವ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ಬಿಜೆಪಿ ಮುಖಂಡ ಕಂದಕೂರಪ್ಪ ವಾಲ್ಮೀಕಿ ಹೇಳಿದರು.</p>.<p>ತಾಲ್ಲೂಕಿನ ನೆರಬೆಂಚಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮರ್ಥ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕೇವಲ ಸಿನಿಮಾ, ಟೆಲಿವಿಷನ್ ಕಾರ್ಯಕ್ರಮಗಳಿಗೆ ಮರುಳಾಗುತ್ತಿರುವುದರಿಂದ ಜನಪದ ಕಲೆ ನಶಿಸುತ್ತಿದೆ. ಜನಪದ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಆದರೂ ಇಂಥ ಕಾರ್ಯಕ್ರಮಗಳಿಂದಲಾದರೂ ಆ ಸಂಸ್ಕೃತಿಯ ಜೀವಂತಿಕೆಯ ಮೂಲ ಪರಂಪರೆಯನ್ನು ಉಳಿಸಲು ಸಾಧ್ಯವಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.</p>.<p>ಕಂದಕೂರ ಗ್ರಾಮ ಪಂಚಾಯಿತಿ ಸದಸ್ಯ ಸಲೀಂಸಾಬ್ ಟೆಂಗುಂಟಿ, ಮೋಹನಲಾಲ್ ಜೈನ್, ಉಮೇಶ ಹಿರೇಮಠ ಇತರರು ಜನಪದ ಕಾರ್ಯಕ್ರಮ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷೆ ಶಾಂತಮ್ಮ ತಳವಾರ, ಸದಸ್ಯರಾದ ಜಯಶ್ರೀ ಉಪ್ಪಲದಿನ್ನಿ, ಹನಮಗೌಡ ಗೌಡ್ರ, ಶೇಖಪ್ಪ ಮ್ಯಾಗಳಮನಿ ಉಪಸ್ಥಿತರಿದ್ದರು. ಜನಪದ ಕಲಾವಿದರಾದ ಬಸವರಾಜ ಉಪ್ಪಲದಿನ್ನಿ ಹಾಗೂ ಸಂಗಡಿಗರು ಜನಪದ ಸಂಗೀತ ನೆರವೇರಿಸಿದರು.</p>.<p>ಕಲಾವಿದರಾದ ಅಯ್ಯಪ್ಪ ಬಡಿಗೇರ, ಶರಣಪ್ಪ ಬನ್ನಿಗೊಳ, ಪವಾಡೆಪ್ಪ ಚೌಡ್ಕಿ, ಮಾನಪ್ಪ ಮಂಡಲಮರಿ, ಈರಪ್ಪ ತೋಟದ, ದೊಡ್ಡಪ್ಪ ಕೈಲವಾಡಗಿ, ಶೇಷಗಿರಿ ಸೋನಾರ, ನಬಿಸಾಬ ಕುಷ್ಟಗಿ, ಷರೀಫ್ ಸಾಬ್ ನದಾಫ್, ರಾಮನಗೌಡ ಪಾಟೀಲ, ಆನಂದ ಬಂಡಿಹಾಳ, ಈರನಗೌಡ ಪೋಲಿಸ್ ಪಾಟೀಲ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>