‘ಕೋವಿಡ್ನಿಂದ ಬಳಲುತ್ತಿರುವುದು ತಿಳಿದು ಸ್ನೇಹಿತರಾದ ಬಾಲಾಜಿ, ಬಾಬಣ್ಣ ಅವರು ಧೈರ್ಯದ ಮಾತು ಹೇಳಿದರು. ‘ನೀನು ಈಗ ಯುದ್ಧದ ಭೂಮಿಯಲ್ಲಿ ಇರುವಂತೆ ಕಲ್ಪಿಸಿಕೊಂಡು ವೈರಿಯ ವಿರುದ್ಧ ಹೋರಾಡು. ಎಷ್ಟೇ ಕಷ್ಟನಷ್ಟವಾದರೂ ಸೈನಿಕ ಹೋರಾಟ ಕೈಬಿಡುವುದಿಲ್ಲ. ಹಾಗೆಯೇ ನೀನು ಕೂಡ ಮುನ್ನುಗ್ಗು’ ಎಂದು ಧೈರ್ಯ ತುಂಬಿದರು. ಅವರ ಮಾತುಗಳಿಂದ ನಿಧಾನವಾಗಿ ಚೇತರಿಸಿಕೊಂಡೆ’ ಎಂದು ಅವರು ತಿಳಿಸಿದರು.