ಶಹಾಪುರ (ಮುನಿರಾಬಾದ್): ‘ಮುಂಚೂಣಿ ಕಾರ್ಯಕರ್ತರ ಅವಮಾನ ಅಪರಾಧ’ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಪ್ರೀತ್ ಪಾಟೀಲ ಅಭಿಪ್ರಾಯಪಟ್ಟರು.
ಸಮೀಪದ ಶಹಾಪುರ ಗ್ರಾಮದಲ್ಲಿ ಶನಿವಾರ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾ ಸೋಂಕಿನಿಂದ ಈಗಾಗಲೇ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಸೋಂಕಿಗೆ ಒಳಗಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತ. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ತೀರ ಅವಶ್ಯಕತೆ ಇದ್ದಾಗ ಮಾತ್ರ ಹೊರ ಬರಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು. ಸಾರ್ವಜನಿಕ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು ಕಾಲಕಾಲಕ್ಕೆ ಸೂಚಿಸುವ ಔಷಧ ಸೇವಿಸಬೇಕು ಎಂದು ಹೇಳಿದರು.
ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು ಹಾಗೂ ಪೊಲೀಸರನ್ನು ನಿರ್ಲಕ್ಷಿಸುವುದು ಅಥವಾ ಅಗೌರವಿಸುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಹಾಲಪ್ಪ ಮುತ್ತಾಳ, ಹನುಮಂತ ಗೊಲ್ಲರ್ ಮತ್ತು ಗಣ್ಯರಾದ ಸುರೇಶ್ ಗೌಡ ಪಾಟೀಲ, ಸಣ್ಣ ಹನುಮಂತ ಕುರಿ, ನಿಂಗಜ್ಜ ಚೌದರಿ, ನಾಗರಾಜ ದೊಡ್ಡಮನಿ, ನಿಂಗಪ್ಪ ನಾಗಲಾಪುರ, ಶರಣಪ್ಪ, ಕುಟುಗನಹಳ್ಳಿ ಆಶಾ ಕಾರ್ಯಕರ್ತೆಯರಾದ ಮುಮ್ತಾಜ್ ಬೇಗಂ ಹಾಗೂ ವಿಜಯಮ್ಮ ಉಳ್ಳಾಗಡ್ಡಿ ಇದ್ದರು.