ಜಿಲ್ಲೆಯಾದ್ಯಂತ ಗಣಪತಿ ತಯಾರಿ ಜೋರು; ಕಲಾವಿದರಿಗೆ ಸವಾಲಾದ ತಂಪನೆಯ ವಾತಾವರಣ
ಪ್ರಮೋದ ಕುಲಕರ್ಣಿ/ಮಂಜುನಾಥ ಅಂಗಡಿ
Published : 26 ಆಗಸ್ಟ್ 2024, 5:08 IST
Last Updated : 26 ಆಗಸ್ಟ್ 2024, 5:08 IST
ಫಾಲೋ ಮಾಡಿ
Comments
ಕೊಪ್ಪಳದ ಎಲ್ಐಸಿ ಕಚೇರಿ ಎದುರಿನ ಶೆಡ್ನಲ್ಲಿ ಮಣ್ಣಿನ ಗಣಪತಿಗಳ ತಯಾರಿಕೆಯಲ್ಲಿ ತೊಡಗಿರುವ ವಿನೋದಕುಮಾರ್ ನಾಯಕ್ ಅವರ ತಂಡ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ತಾತ ಮುತ್ತಾತನವರ ಕಾಲದಿಂದಲೂ ಗಣೇಶನ ಮೂರ್ತಿ ಕಾಯಕ ಮಾಡುತ್ತಾ ಬಂದಿದ್ದೇವೆ. ಇದೊಂದು ದೈವಿಕ ಕಾಯಕ. ಆದರೆ ಸರ್ಕಾರ ಕಲೆಗಾರನ ಗುರುತಿಸುವ ಕೆಲಸ ಮಾಡಬೇಕಾಗಿದೆ
ಕುಶಾಲರಾವ್ ಸೌದಾಗರ್ ಕುಕನೂರಿನ ಕಲಾವಿದ
ಮೂರು ತಿಂಗಳು ಹಿಂದಿನಿಂದಲೇ ದೊಡ್ಡ ಗಣಪತಿ ತಯಾರಿಸುವ ಕೆಲಸ ಆರಂಭಿಸಿದ್ದೇವೆ. ವಾತಾವರಣ ತಂಪಿರುವ ಕಾರಣ ಪ್ರತಿವರ್ಷಕ್ಕಿಂತ ಈ ಸಲ ಕೆಲಸ ಹೆಚ್ಚಾಗಿದೆ
ವಿನೋದ್ ಕುಮಾರ ಗಾಯ್ಕರ್ ಮಣ್ಣಿನ ಗಣಪತಿ ತಯಾರಕರು ಕೊಪ್ಪಳ
ಪಿಒಪಿ ಬಳಸದಂತೆ ಸೂಚನೆ
ಕೊಪ್ಪಳ: ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪಿಒಪಿ ಬಳಕೆಯಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ರಾಣಿ ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಇದಲ್ಲದೇ ಸಾರ್ವಜನಿಕ ಆರೋಗ್ಯಕ್ಕೂ ಧಕ್ಕೆಯಾಗುತ್ತದೆ. ಒಂದು ವೇಳೆ ಪಿಒಪಿ ಬಳಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅಗತ್ಯ ಕ್ರಮ ಕೈಗೊಳ್ಳಿ: ಡಿ.ಸಿ. ಸೂಚನೆ
ಕೊಪ್ಪಳ: ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದ್ದಾರೆ. ಗೌರಿ ಗಣೇಶ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸಿ. ನಂತರ ಗೌರಿ-ಗಣೇಶ ಮೂರ್ತಿಗಳನ್ನು ಕೆರೆ ಬಾವಿ ಕಾಲುವೆ ನದಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲಮಾಲಿನ್ಯ ಉಂಟಾಗುವುದು. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ‘ವಾರ್ಡ್ಗಳ ಮಟ್ಟದಲ್ಲಿ ಸಮಿತಿ ರಚಿಸಿ ವಿಗ್ರಹಗಳ ವಿಸರ್ಜನೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯಬೇಕು’ ಎಂದು ಹೇಳಿದ್ದಾರೆ.