ಅರ್ಚಕ ಆನಂದ್ ಬಾಬ ಮಾತನಾಡಿ,‘ಮೂರ್ತಿ ಸ್ಥಳಾಂತರಕ್ಕೆ ಸಿದ್ದತೆ ಮಾಡಿಕೊಂಡು ನನ್ನನ್ನು ಕರೆದರು. ನಾನು ಹೋಗುವಷ್ಟರೊಳಗೆ ಮೂರ್ತಿ ಕಿತ್ತಲಾಗಿತ್ತು. ಅದನ್ನು ಸ್ಥಳಾಂತರ ಮಾಡಿ, ಮ್ಯಾನೇಜರ್ಗೆ ಮಾಹಿತಿ ಮುಟ್ಟಿಸಿದೆ’ ಎಂದು ತಿಳಿಸಿದರು. ರಾಜವಂಶಸ್ಥ ರಾಮದೇವರಾಯ ಮಾತನಾಡಿ,‘ಮೂ ರ್ತಿ ಪ್ರತಿಷ್ಠಾಪನೆ ಅಂದ್ರೆ ಏನು ಎಂದು ತಿಳಿದುಕೊಂಡಿದ್ದೀರಿ?. ಪಂಪಾಸರೋವರ ರಾಮಾಯಣ ಕಾಲದ ಇತಿಹಾಸ ಹೊಂದಿದೆ. ಹಣ ಇದ್ರೆ ಏನೂ ಬೇಕಾದ್ರೂ ಮಾಡ್ತೀರಾ?. ಯಾರನ್ನು ಕೇಳಿ ಮೂರ್ತಿ ಸ್ಥಳಾಂತರ ಮಾಡಿದಿರಿ. ನಿಮ್ಮ ಕೆಲಸ ದೇವಸ್ಥಾನದ ಜೀರ್ಣೋದ್ಧಾರ. ಅದನ್ನು ಬಿಟ್ಟು ಮೂರ್ತಿ ತೆಗೆದಿದ್ದೀರಿ’ ಎಂದು ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡರು.