<p><strong>ಯಲಬುರ್ಗಾ: </strong>ಸ್ಥಳೀಯ ತಹಶೀಲ್ ಕಚೇರಿ ಆವರಣದಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ.</p>.<p>ಗಾಯಾಳುಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಸೋಮವಾರ ಮಧ್ಯಾಹ್ನ ದಾಳಿ ನಡೆದಿದೆ. ಚಂಡೂರು ಗ್ರಾಮದ ಬಸಯ್ಯ, ಕಲ್ಲೂರು ಗ್ರಾಮದ ಹನಮಂತಪ್ಪ ಹಿರೇಕುರುಬರ, ಧರ್ಮರಾಜ ಹಿರೇಕುರುಬರ ಹಾಗೂ ಹಗೆದಾಳದ ಸೋಮನಗೌಡ ಮತ್ತು ಮೂರು ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಕಚೇರಿ ಆವರಣದಲ್ಲಿರುವ ಹುಣಸೆ ಮರದಲ್ಲಿದ್ದ ಹೆಜ್ಜೇನು ಗೂಡಿನಿಂದ ಹುಳುಗಳು ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊದಲಿಗೆ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸೋಮನಗೌಡ ಎಂಬವರು ಸ್ಥಳದಲ್ಲಿಯೇ ಕುಸಿದು ತೀವ್ರ ಅಸ್ವಸ್ಥ್ಯಗೊಳ್ಳುತ್ತಿದ್ದಂತೆ ಕೆಲ ಯುವಕರು ಅವರನ್ನು ರಕ್ಷಿಸಲು ಮುಂದಾದರು, ಹೆಲ್ಮೆಟ್ ಹಾಗೂ ವಸ್ತ್ರಗಳನ್ನು ಹೊಚ್ಚಿಕೊಂಡು ಗಾಯಾಳುಗಳನ್ನು ದಾಳಿ ಸ್ಥಳಗಳಿಂದ ಕರೆತಂದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮತ್ತೆ ಮೂರ್ನಾಲ್ಕು ಜನರಿಗೆ ಕಚ್ಚಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ: </strong>ಸ್ಥಳೀಯ ತಹಶೀಲ್ ಕಚೇರಿ ಆವರಣದಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ.</p>.<p>ಗಾಯಾಳುಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಸೋಮವಾರ ಮಧ್ಯಾಹ್ನ ದಾಳಿ ನಡೆದಿದೆ. ಚಂಡೂರು ಗ್ರಾಮದ ಬಸಯ್ಯ, ಕಲ್ಲೂರು ಗ್ರಾಮದ ಹನಮಂತಪ್ಪ ಹಿರೇಕುರುಬರ, ಧರ್ಮರಾಜ ಹಿರೇಕುರುಬರ ಹಾಗೂ ಹಗೆದಾಳದ ಸೋಮನಗೌಡ ಮತ್ತು ಮೂರು ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಕಚೇರಿ ಆವರಣದಲ್ಲಿರುವ ಹುಣಸೆ ಮರದಲ್ಲಿದ್ದ ಹೆಜ್ಜೇನು ಗೂಡಿನಿಂದ ಹುಳುಗಳು ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊದಲಿಗೆ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸೋಮನಗೌಡ ಎಂಬವರು ಸ್ಥಳದಲ್ಲಿಯೇ ಕುಸಿದು ತೀವ್ರ ಅಸ್ವಸ್ಥ್ಯಗೊಳ್ಳುತ್ತಿದ್ದಂತೆ ಕೆಲ ಯುವಕರು ಅವರನ್ನು ರಕ್ಷಿಸಲು ಮುಂದಾದರು, ಹೆಲ್ಮೆಟ್ ಹಾಗೂ ವಸ್ತ್ರಗಳನ್ನು ಹೊಚ್ಚಿಕೊಂಡು ಗಾಯಾಳುಗಳನ್ನು ದಾಳಿ ಸ್ಥಳಗಳಿಂದ ಕರೆತಂದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮತ್ತೆ ಮೂರ್ನಾಲ್ಕು ಜನರಿಗೆ ಕಚ್ಚಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>