ಕಚೇರಿ ಆವರಣದಲ್ಲಿರುವ ಹುಣಸೆ ಮರದಲ್ಲಿದ್ದ ಹೆಜ್ಜೇನು ಗೂಡಿನಿಂದ ಹುಳುಗಳು ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊದಲಿಗೆ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸೋಮನಗೌಡ ಎಂಬವರು ಸ್ಥಳದಲ್ಲಿಯೇ ಕುಸಿದು ತೀವ್ರ ಅಸ್ವಸ್ಥ್ಯಗೊಳ್ಳುತ್ತಿದ್ದಂತೆ ಕೆಲ ಯುವಕರು ಅವರನ್ನು ರಕ್ಷಿಸಲು ಮುಂದಾದರು, ಹೆಲ್ಮೆಟ್ ಹಾಗೂ ವಸ್ತ್ರಗಳನ್ನು ಹೊಚ್ಚಿಕೊಂಡು ಗಾಯಾಳುಗಳನ್ನು ದಾಳಿ ಸ್ಥಳಗಳಿಂದ ಕರೆತಂದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮತ್ತೆ ಮೂರ್ನಾಲ್ಕು ಜನರಿಗೆ ಕಚ್ಚಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.