ಗಂಗಾವತಿ: ತಾಲ್ಲೂಕಿನ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಲ್ಲತಾವರಗೇರಿ, ಬಳ್ಳಾರಿ, ಡಿ.ಹೊಸೂರ್ ಸೇರಿದಂತೆಮುಂತಾದ ಗ್ರಾಮಗಳಿಗೆ ಶಾಸಕಪರಣ್ಣ ಮುನವಳ್ಳಿ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕಲ್ಲತಾವರಗೇರಾ ಗ್ರಾಮದ ಮಾರುತೇಶ್ವರಕೆರೆ ಕಾಮಗಾರಿ ವೀಕ್ಷಣೆಮಾಡಿದರು.
‘ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು ಅನೇಕ ರೀತಿಯ ತೊಂದರೆ ಅನುಭವಿಸಿದ್ದಾರೆ. ಅಭಿವೃದ್ಧಿ ಕಾರ್ಯದ ಬಗ್ಗೆ ಚಿಂತನೆ ಮಾಡುವುದರ ಜತೆಗೆ ಸಾಂಕ್ರಾಮಿಕ ರೋಗದ ಸ್ಥಿತಿಗತಿಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಸರ್ಕಾರದ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಇದು ಸಕಾಲವಾಗಿದೆ’ ಎಂದು ಶಾಸಕರು ಹೇಳಿದರು.
ಕೋವಿಡ್ನಂತಹ ಸಂದರ್ಭದಲ್ಲಿ ಪಕ್ಷದ ಮುಖಂಡರನ್ನು ಕರೆದುಕೊಂಡು ದಿನಸಿ ಕಿಟ್ ನೀಡಿದ್ದೇವೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಮಣ್ಣ ಚೌಡ್ಕಿ, ವೀರಭದ್ರಪ್ಪ ಶೆಟ್ಟರ, ನಿಂಗಪ್ಪ ಯಲ್ಲಪ್ಪ ಸುಳಿಕೇರಿ, ಹನಮನಗೌಡ ಬಳ್ಳಾರಿ ಅಶೋಕ, ವಿಜಯಕುಮಾರ ಹಾಲಹಳ್ಳಿ ಹಾಗೂ ಯಂಕಪ್ಪ ಕಟ್ಟಿಮನಿ ಇದ್ದರು.