ಪರಶುರಾಮ್ ಸಾವು ಹೇಗಾಗಿದೆ ಎಂದು ವರದಿಯೇ ಬಂದಿಲ್ಲ ಆದರೂ ಗೃಹ ಸಚಿವ ಪರಮೇಶ್ವರ್ ಹೃದಯಾಘಾತದಿಂದ ಸಾವು ಎಂದು ತೀರ್ಪು ನೀಡಿದ್ದಾರೆ. ಎಫ್ಐಆರ್ನಲ್ಲಿ ಉಲ್ಲೇಖಿಸಿದ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಬಂಧನವಾಗಲೇಬೇಕು ಇಲ್ಲವಾದರೆ ಹೋರಾಟ ಚುರುಕುಗೊಳಿಸಲಾಗುವುದು.
- ಆರ್. ಅಶೋಕ್ ವಿಧಾನಸಭೆ ವಿರೋಧ ಪಕ್ಷದ ನಾಯಕ
ನನ್ನ ಸಹೋದರ ಮೃತಪಟ್ಟು 16 ತಾಸಿನ ಬಳಿಕ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಕೂಡಲೇ ಬಂಧಿಸಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
-ಹನುಮಂತಪ್ಪ ಪರಶುರಾಮ್ ಸಹೋದರ ಸಹೋದರ
ಪರಶುರಾಮ್ ಮೃತಪಟ್ಟು 16 ತಾಸುಗಳ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯಾದಗಿರಿ ಎಸ್ಪಿಗೆ ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ ದೂರು ದಾಖಲಿಸದಂತೆ ಒತ್ತಡ ಹೇರಿದ್ದರು. ಈ ಬಗ್ಗೆ ತನಿಖೆಯಾಗಬೇಕು.