ತಾಂಡಾದಲ್ಲಿ ಸಂಬಂಧಿಕರ ಮನೆಗೆ ಹೊರಟ ಮಹಿಳೆಯನ್ನು ತಡೆದು, ಅವರ ಮೈ ಕೈ ಮುಟ್ಟಿ, ಅವಾಚ್ಯ ಶಬ್ಧಗಳಿಂದ ಬೈದು ಅವರಿಗೆ ಹಲ್ಲೇ ಮಾಡಿದ್ದರು ಎನ್ನಲಾದ ನೀಲಪ್ಪ ಭರಮಪ್ಪ ಕಕ್ಕಿಹಳ್ಳಿ, ತಿರುಪತಿ ತಂದೆ ಭರಮಪ್ಪ ಕಕ್ಕಿಹಳ್ಳಿ ಇವರನ್ನು ದೋಷಿಗಳೆಂದು ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಶೈಲ ಬಾಗಡಿರವರು ಈಚೆಗೆ (ಫೆ.28) ತೀರ್ಪು ನೀಡಿದ್ದಾರೆ.