<p>ಕಾರಟಗಿ: ಈಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ಗುಂಡೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಲು ಕೆಲ ಅಡಿ ಮಾತ್ರ ಬಾಕಿ ಇದೆ. ಬಿಸಿಲು, ಬರಗಾಲದ ಚಿತ್ರಣದಲ್ಲಿದ್ದ ಈ ಭಾಗದ ಜನರಲ್ಲಿ ತುಂಬುತ್ತಿರುವ ಹಳ್ಳ ನೋಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.</p><p>ಹಳ್ಳ ತುಂಬಿದ ಸುದ್ದಿ ಕೇಳಿ ವಿವಿಧ ಗ್ರಾಮಗಳ ಜನರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಿಸಿ, ಪರಸ್ಪರ ಖುಷಿಯ ವಿನಿಮಯ ಮಾಡಿಕೊಳ್ಳುತ್ತಿರುವುದು ಶುಕ್ರವಾರದಿಂದ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಲಕ್ಷ್ಮೀಕ್ಯಾಂಪ್- ಗುಂಡೂರು ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.</p><p><br>ಬಿಸಿಲಿನ ಬೇಗೆಯಿಂದ ಬೆಸತ್ತ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ತಾಲ್ಲೂಕಿನ ವಿವಿಧೆಡೆಯ ಹಳ್ಳಗಳು ಮರುಜೀವ ಪಡೆದುಕೊಂಡು ಸಂಭ್ರಮಿಸುತ್ತಿವೆ. </p><p>ಹಳ್ಳ ಹರಿಯುವ ದೃಶ್ಯ ನೋಡುಗರಲ್ಲಿ ಸಂತಸ ಮೂಡಿಸುತ್ತಿದೆ.</p><p><br>ಗುಂಡೂರ ಹಳ್ಳ ತುಂಬಿದ ಬಳಿಕ ಹೆಚ್ಚಾದ ನೀರು ಮುಂದೆ ಸಿದ್ದಾಪುರ ಮೊದಲಾದ ಹಳ್ಳಗಳ ಮೂಲಕ ತುಂಗಭದ್ರಾ ನದಿಯನ್ನು ಸೇರಲಿದೆ. ತುಂಗಭದ್ರಾ ಜಲಾಶಯದ ನೀರಿನ ಮೊದಲೇ ಗುಂಡೂರಿನ ಬ್ರಿಡ್ಜ್ ಕಂ ಬ್ಯಾರೇಜ್ ನೀರು ನದಿಯನ್ನು ಪ್ರವೇಶಿಸಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರಟಗಿ: ಈಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ಗುಂಡೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಲು ಕೆಲ ಅಡಿ ಮಾತ್ರ ಬಾಕಿ ಇದೆ. ಬಿಸಿಲು, ಬರಗಾಲದ ಚಿತ್ರಣದಲ್ಲಿದ್ದ ಈ ಭಾಗದ ಜನರಲ್ಲಿ ತುಂಬುತ್ತಿರುವ ಹಳ್ಳ ನೋಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.</p><p>ಹಳ್ಳ ತುಂಬಿದ ಸುದ್ದಿ ಕೇಳಿ ವಿವಿಧ ಗ್ರಾಮಗಳ ಜನರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಿಸಿ, ಪರಸ್ಪರ ಖುಷಿಯ ವಿನಿಮಯ ಮಾಡಿಕೊಳ್ಳುತ್ತಿರುವುದು ಶುಕ್ರವಾರದಿಂದ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಲಕ್ಷ್ಮೀಕ್ಯಾಂಪ್- ಗುಂಡೂರು ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.</p><p><br>ಬಿಸಿಲಿನ ಬೇಗೆಯಿಂದ ಬೆಸತ್ತ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ತಾಲ್ಲೂಕಿನ ವಿವಿಧೆಡೆಯ ಹಳ್ಳಗಳು ಮರುಜೀವ ಪಡೆದುಕೊಂಡು ಸಂಭ್ರಮಿಸುತ್ತಿವೆ. </p><p>ಹಳ್ಳ ಹರಿಯುವ ದೃಶ್ಯ ನೋಡುಗರಲ್ಲಿ ಸಂತಸ ಮೂಡಿಸುತ್ತಿದೆ.</p><p><br>ಗುಂಡೂರ ಹಳ್ಳ ತುಂಬಿದ ಬಳಿಕ ಹೆಚ್ಚಾದ ನೀರು ಮುಂದೆ ಸಿದ್ದಾಪುರ ಮೊದಲಾದ ಹಳ್ಳಗಳ ಮೂಲಕ ತುಂಗಭದ್ರಾ ನದಿಯನ್ನು ಸೇರಲಿದೆ. ತುಂಗಭದ್ರಾ ಜಲಾಶಯದ ನೀರಿನ ಮೊದಲೇ ಗುಂಡೂರಿನ ಬ್ರಿಡ್ಜ್ ಕಂ ಬ್ಯಾರೇಜ್ ನೀರು ನದಿಯನ್ನು ಪ್ರವೇಶಿಸಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>