’ಗುಡಗೇರಿ ಗ್ರಾಮದಲ್ಲಿ ರಸ್ತೆ ಸರಿಯಿಲ್ಲ. ಈ ಕಾರಣಕ್ಕೆ ಬಸ್ ಬರುವುದಿಲ್ಲ. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗಲು ಪಡಿಪಾಟಲು ಪಡಬೇಕಾಗಿದೆ. ರಸ್ತೆ ಅಭಿವೃದ್ಧಿಗೆ ಹಲವು ಸಲ ಭೂಮಿಪೂಜೆ ಮಾಡಿದ್ದೇ ಸಾಧನೆಯಾಗಿದ್ದು, ರಸ್ತೆ ಮಾತ್ರ ಆಗಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆಮನೆಗೆ ಮತಯಾಚನೆ ಮುಗಿದ ಬಳಿಕ ನಡೆದ ಸಮಾರಂಭದಲ್ಲಿಯೂ ಗ್ರಾಮದ ಹಲವರು ಹಿಟ್ನಾಳ ವಿರುದ್ಧ ಅಸಮಾಧಾನ ಹೊರಹಾಕಿದರು.