ಸಾಹಿತ್ಯ ಭವನದಲ್ಲಿ ಬಾಗಿಲು ಮುರಿದಿರುವುದು
ವಿದ್ಯುತ್ ಸಂಪರ್ಕದ ಸ್ವಿಚ್ಗಳು ಕಿತ್ತು ಹೋಗಿರುವುದು
ಸಾಹಿತ್ಯ ಭವನದ ಚಾವಣಿಯ ಪದರು ಕಳಚಿರುವುದು

ಸಾಹಿತ್ಯ ಭವನದಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಆಗಬೇಕಾಗಿದೆ. ಸರಿಯಾಗಿ ನಿರ್ವಹಣೆ ಮಾಡುವ ಹಾಗೂ ತಾಂತ್ರಿಕವಾಗಿ ತಿಳಿದುಕೊಂಡವರು ಇದ್ದರೆ ಸಂಘಟಕರಿಗೆ ಅನುಕೂಲವಾಗುತ್ತದೆ. ರಿಯಾಯಿತಿ ದರದಲ್ಲಿ ಭವನ ಬಾಡಿಗೆ ಕೊಟ್ಟರೆ ಹೆಚ್ಚು ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ
ಲಕ್ಷ್ಮಣ ಪೀರಗಾರ ರಂಗಕರ್ಮಿ
ಭವನ ಅವ್ಯವಸ್ಥೆಯಿಂದ ಕೂಡಿರುವ ಕಾರಣ ರಂಗಭೂಮಿ ಚಟುವಟಿಕೆ ಕಡಿಮೆಯಾಗುತ್ತಿವೆ. ಬಾಡಿಗೆ ಜಾಸ್ತಿಯಾಗಿದೆ. ಕೊಪ್ಪಳದ ಕೇಂದ್ರಭಾಗದಲ್ಲಿರುವ ಕಾರಣ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು
ರಂಗನಾಥ ಕೋಳೂರು ರಂಗಕರ್ಮಿ
ಆದಷ್ಟು ಬೇಗನೆ ರಂಗಮಂದಿರ ಕಾರ್ಯಪೂರ್ಣಗೊಳಿಸಿ ಸಾಹಿತ್ಯಿಕ ರಂಗಭೂಮಿ ಚಟುವಟಿಕೆ ನಡೆಸಲು ಅಲ್ಲಿ ಅವಕಾಶ ಕೊಡಲಾಗುವುದು. ಬಳಿಕ ಸಾಹಿತ್ಯ ಭವನ ನವೀಕರಣ ಮಾಡಬೇಕೊ ಪುನರ್ ನಿರ್ಮಿಸಬೇಕೊ ಎನ್ನುವುದರ ಬಗ್ಗೆ ಎಲ್ಲರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬರಲಾಗುವುದು
ಡಾ.ಸುರೇಶ ಇಟ್ನಾಳ ಜಿಲ್ಲಾಧಿಕಾರಿ