45 ವರ್ಷ ಮೇಲ್ಪಟ್ಟ ಎಲ್ಲ ಕಾರ್ಮಿಕರಿಗೆ ಮಾಸಿಕ ಸಹಾಯಧನ ₹3 ಸಾವಿರ ನೀಡಬೇಕು. ಎಲ್ಲ ಮಸಣ ಕಾರ್ಮಿಕರ ಕುಟುಂಬಗಳಿಗೆ ಕಡ್ಡಾಯವಾಗಿ ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಶೇ.75ರಷ್ಟು ನಿರುದ್ಯೋಗ ಭತ್ಯೆ ನೀಡಬೇಕು ಎಂದರು. ಗಾದೆಪ್ಪ ಬೆಣಕಲ್, ಶ್ರೀನಿವಾಸ್ ಹೊಸಳ್ಳಿ, ಮುತ್ತಣ್ಣ ದಾಸನಾಳ, ಅಂಜಿನಪ್ಪ, ಶಿವಲಿಂಗಪ್ಪ, ಬಸವರಾಜ ಆನೆಗೊಂದಿ, ಮರಿಯಪ್ಪ, ಶೇಖರ ಇದ್ದರು.