ಆಗಿದ್ದೇನು: ‘ಕಳೆದ ತಿಂಗಳು ಕುರುಬ ಸಮುದಾಯದ ಮಾರ್ತಾಂಡಪ್ಪ ಪೊಲೀಸ್ ಪಾಟೀಲ ಸಾಕಿದ್ದ ನಾಯಿ ಮೇಕೆಯನ್ನು ಕಚ್ಚಿತ್ತು. ನಾಯಿ ಕಟ್ಟಿಹಾಕಿಕೊಳ್ಳಿ ಎಂದು ದೂರುದಾರ ಶರಣಪ್ಪ ಅವರ ಅಣ್ಣ ವೀರಣ್ಣ ಹೇಳಿದ್ದರು. ಕುಪಿತಗೊಂಡ ಮಾರ್ತಾಂಡಪ್ಪ ಮತ್ತವರ ಕುಟುಂಬದವರು ವೀರಣ್ಣ ಮತ್ತು ಮಹಿಳೆಯರು, ಮಕ್ಕಳ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.