<p><strong>ಕುಷ್ಟಗಿ</strong>: ಕೋವಿಡ್ ನಿಯಂತ್ರಿಸಲು ಪಟ್ಟಣವನ್ನು ಸೀಲ್ಡೌನ್ ಮಾಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪುರಸಭೆಯಲ್ಲಿ ಸೋಮವಾರ ನಡೆದ ಸಭೆ ಗೊಂದಲದ ಗೂಡಾಯಿತು.</p>.<p>ಸಭೆಯಲ್ಲಿ ಪ್ರಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಜಿ.ಕೆ.ಹಿರೇಮಠ ಮತ್ತು ಕೆಲ ಸದಸ್ಯರು ಜನರಿಗೆ ತೊಂದರೆಯಾಗದಂತೆ ಸೀಲ್ಡೌನ್ ಮಾಡುವ ನಿಟ್ಟಿನಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಾತನಾಡಿ ಸಹಮತ ವ್ಯಕ್ತಪಡಿಸಿದ ಶಾಸಕ ಅಮರೇಗೌಡ ಬಯ್ಯಾಪುರ, ಸಾಧ್ಯವಾಗುವುದಾದರೆ ಸೀಲ್ಡೌನ್ ಮಾಡುವುದಕ್ಕೆ ತಮ್ಮ ಅಭ್ಯಂತರ ಇಲ್ಲ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೂ ಚರ್ಚಿಸಿದ್ದೇನೆ. ನಿರ್ಧಾರ ತೆಗೆದುಕೊಳ್ಳುವುದು ತಹಶೀಲ್ದಾರ್ ಅವರಿಗೆ ಸೇರಿರುತ್ತದೆ ಎಂದರು.</p>.<p>ಈ ಕುರಿತು ಸಭೆಗೆ ವಿವರಿಸಿದ ತಹಶೀಲ್ದಾರ್ ಎಂ.ಸಿದ್ದೇಶ್,‘ಸೀಲ್ಡೌನ್ ಮಾಡುವುದಕ್ಕೆ ಕೆಲವು ಆಯಾಮಗಳು ಇರುತ್ತವೆ. ಸದಸ್ಯರು, ಶಾಸಕರ ಅಭಿಪ್ರಾಯವನ್ನು ಜಿಲ್ಲಾಡಳಿತದ ಗಮನಕ್ಕೆ ತರುತ್ತೇವೆ. ಸೀಲ್ಡೌನ್ ನಿರ್ಧಾರ ತೆಗೆದುಕೊಳ್ಳಬೇಕೆ ಬೇಡವೆ ಎಂಬುದನ್ನು ಪರಿಶೀಲಿಸಲು ಎರಡು ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ’ ಎಂದರು.</p>.<p>ಅಲ್ಲದೆ ಕಾನೂನಾತ್ಮಕವಾಗಿ ಸೀಲ್ಡೌನ್ ಮಾಡುವ ಬದಲು ನಾವೇ ಸ್ವಯಂ ಪ್ರೇರಣೆಯಿಂದ ಕಟ್ಟುನಿಟ್ಟಿನ ಕ್ರಮ ಅನುಸರಿಸುವುದು ಮಹತ್ವದ್ದಾಗಿರುತ್ತದೆ ಎಂದೂ ಹೇಳಿದರು.</p>.<p><strong>ಹೊತ್ತಿದ ಕಿಡಿ: </strong>ಅಲ್ಲಿಯವರೆಗೂ ಸಭೆ ಸುಗಮವಾಗಿ ನಡೆಯಿತಾದರೂ ಸದಸ್ಯ ಮೈನುದ್ದೀನ್ ಮುಲ್ಲಾ ಅವರು ‘ಸೀಲ್ಡೌನ್ ಕುರಿತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ವ್ಯವಸ್ಥಿತ ರೀತಿಯಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಹೇಳಿದರು.</p>.<p>ಆದರೆ ಆ ವಿಷಯ ಇಲ್ಲಿ ಅಪ್ರಸ್ತುತ ಅದರ ಬಗ್ಗೆ ಪ್ರಸ್ತಾಪಿಸುವುದು ಬೇಡ ಎಂದು ಜಿ.ಕೆ.ಹಿರೇಮಠ ಮತ್ತು ಸ್ವತಃ ಶಾಸಕ ಬಯ್ಯಾಪುರ ಸಮಾಧಾನಪಡಿಸಲು ಮುಂದಾದರೂ ಅದಕ್ಕೆ ಮಣಿಯದ ಮೈನುದ್ದೀನ್ ಮುಲ್ಲಾ ಮಾತು ಮುಂದುವರಿಸಿದಾಗ ಗದ್ದಲ ಶುರುವಾಯಿತು. ಮಾತಿಗೆ ಮಾತು ಬೆಳೆದು ಮೂಲ ವಿಷಯ ಗೌಣವಾಯಿತು.</p>.<p>ಅಷ್ಟೇ ಅಲ್ಲ ‘ಶಾಸಕರ ಸೂಚನೆಯಂತೆ ತರಕಾರಿ ಮಾರುಕಟ್ಟೆಯನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು’ ಎಂದು ಜಿ.ಕೆ.ಹಿರೇಮಠ ಹೇಳುತ್ತಿದ್ದಂತೆ ಸಿಟ್ಟಿಗೆದ್ದು ಎದ್ದು ನಿಂತ ಶಾಸಕ, ಅದು ನನ್ನ ತೀರ್ಮಾನ ಅಲ್ಲ. ಸಮಾಜಕ್ಕೆ ತಪ್ಪು ಸಂದೇಶ ನೀಡಬೇಡಿ ಎಂದು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಶಾಸಕ ಹಾಗೂ ಹಿರೇಮಠ ಪರಸ್ಪರ ಮಾತಿಗಿಳಿದಿದ್ದರಿಂದ ಸಭೆ ಮತ್ತಷ್ಟೂ ಗೊಂದಲಕ್ಕೀಡಾಯಿತು. ಎರಡು ಮೂರು ದಿನಗಳಲ್ಲಿ ಸೀಲ್ಡೌನ್ ಬಗ್ಗೆ ನಿರ್ಧರಿಸುವುದಾಗಿ ತಹಶೀಲ್ದಾರ್ ಹೇಳಿ ಸಭೆ ಮುಕ್ತಾಯಗೊಳಿಸಿದರು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಎಸ್.ಆರ್.ನಿಂಗಪ್ಪ, ಪುರಸಭೆ ವ್ಯವಸ್ಥಾಪಕ ಪ್ರಹ್ಲಾದ ಜೋಷಿ ಇತರರು ಇದ್ದರು. ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಸದೆ ಸದಸ್ಯರು ಪರಸ್ಪರ ಕದನಕ್ಕೆ ಇಳಿದು ಸಮಯ ವ್ಯರ್ಥಮಾಡಿದರು ಎಂದು ಅಧಿಕಾರಿಯೊಬ್ಬರು ನಂತರ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ</strong>: ಕೋವಿಡ್ ನಿಯಂತ್ರಿಸಲು ಪಟ್ಟಣವನ್ನು ಸೀಲ್ಡೌನ್ ಮಾಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪುರಸಭೆಯಲ್ಲಿ ಸೋಮವಾರ ನಡೆದ ಸಭೆ ಗೊಂದಲದ ಗೂಡಾಯಿತು.</p>.<p>ಸಭೆಯಲ್ಲಿ ಪ್ರಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಜಿ.ಕೆ.ಹಿರೇಮಠ ಮತ್ತು ಕೆಲ ಸದಸ್ಯರು ಜನರಿಗೆ ತೊಂದರೆಯಾಗದಂತೆ ಸೀಲ್ಡೌನ್ ಮಾಡುವ ನಿಟ್ಟಿನಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಾತನಾಡಿ ಸಹಮತ ವ್ಯಕ್ತಪಡಿಸಿದ ಶಾಸಕ ಅಮರೇಗೌಡ ಬಯ್ಯಾಪುರ, ಸಾಧ್ಯವಾಗುವುದಾದರೆ ಸೀಲ್ಡೌನ್ ಮಾಡುವುದಕ್ಕೆ ತಮ್ಮ ಅಭ್ಯಂತರ ಇಲ್ಲ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೂ ಚರ್ಚಿಸಿದ್ದೇನೆ. ನಿರ್ಧಾರ ತೆಗೆದುಕೊಳ್ಳುವುದು ತಹಶೀಲ್ದಾರ್ ಅವರಿಗೆ ಸೇರಿರುತ್ತದೆ ಎಂದರು.</p>.<p>ಈ ಕುರಿತು ಸಭೆಗೆ ವಿವರಿಸಿದ ತಹಶೀಲ್ದಾರ್ ಎಂ.ಸಿದ್ದೇಶ್,‘ಸೀಲ್ಡೌನ್ ಮಾಡುವುದಕ್ಕೆ ಕೆಲವು ಆಯಾಮಗಳು ಇರುತ್ತವೆ. ಸದಸ್ಯರು, ಶಾಸಕರ ಅಭಿಪ್ರಾಯವನ್ನು ಜಿಲ್ಲಾಡಳಿತದ ಗಮನಕ್ಕೆ ತರುತ್ತೇವೆ. ಸೀಲ್ಡೌನ್ ನಿರ್ಧಾರ ತೆಗೆದುಕೊಳ್ಳಬೇಕೆ ಬೇಡವೆ ಎಂಬುದನ್ನು ಪರಿಶೀಲಿಸಲು ಎರಡು ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ’ ಎಂದರು.</p>.<p>ಅಲ್ಲದೆ ಕಾನೂನಾತ್ಮಕವಾಗಿ ಸೀಲ್ಡೌನ್ ಮಾಡುವ ಬದಲು ನಾವೇ ಸ್ವಯಂ ಪ್ರೇರಣೆಯಿಂದ ಕಟ್ಟುನಿಟ್ಟಿನ ಕ್ರಮ ಅನುಸರಿಸುವುದು ಮಹತ್ವದ್ದಾಗಿರುತ್ತದೆ ಎಂದೂ ಹೇಳಿದರು.</p>.<p><strong>ಹೊತ್ತಿದ ಕಿಡಿ: </strong>ಅಲ್ಲಿಯವರೆಗೂ ಸಭೆ ಸುಗಮವಾಗಿ ನಡೆಯಿತಾದರೂ ಸದಸ್ಯ ಮೈನುದ್ದೀನ್ ಮುಲ್ಲಾ ಅವರು ‘ಸೀಲ್ಡೌನ್ ಕುರಿತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ವ್ಯವಸ್ಥಿತ ರೀತಿಯಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಹೇಳಿದರು.</p>.<p>ಆದರೆ ಆ ವಿಷಯ ಇಲ್ಲಿ ಅಪ್ರಸ್ತುತ ಅದರ ಬಗ್ಗೆ ಪ್ರಸ್ತಾಪಿಸುವುದು ಬೇಡ ಎಂದು ಜಿ.ಕೆ.ಹಿರೇಮಠ ಮತ್ತು ಸ್ವತಃ ಶಾಸಕ ಬಯ್ಯಾಪುರ ಸಮಾಧಾನಪಡಿಸಲು ಮುಂದಾದರೂ ಅದಕ್ಕೆ ಮಣಿಯದ ಮೈನುದ್ದೀನ್ ಮುಲ್ಲಾ ಮಾತು ಮುಂದುವರಿಸಿದಾಗ ಗದ್ದಲ ಶುರುವಾಯಿತು. ಮಾತಿಗೆ ಮಾತು ಬೆಳೆದು ಮೂಲ ವಿಷಯ ಗೌಣವಾಯಿತು.</p>.<p>ಅಷ್ಟೇ ಅಲ್ಲ ‘ಶಾಸಕರ ಸೂಚನೆಯಂತೆ ತರಕಾರಿ ಮಾರುಕಟ್ಟೆಯನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು’ ಎಂದು ಜಿ.ಕೆ.ಹಿರೇಮಠ ಹೇಳುತ್ತಿದ್ದಂತೆ ಸಿಟ್ಟಿಗೆದ್ದು ಎದ್ದು ನಿಂತ ಶಾಸಕ, ಅದು ನನ್ನ ತೀರ್ಮಾನ ಅಲ್ಲ. ಸಮಾಜಕ್ಕೆ ತಪ್ಪು ಸಂದೇಶ ನೀಡಬೇಡಿ ಎಂದು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಶಾಸಕ ಹಾಗೂ ಹಿರೇಮಠ ಪರಸ್ಪರ ಮಾತಿಗಿಳಿದಿದ್ದರಿಂದ ಸಭೆ ಮತ್ತಷ್ಟೂ ಗೊಂದಲಕ್ಕೀಡಾಯಿತು. ಎರಡು ಮೂರು ದಿನಗಳಲ್ಲಿ ಸೀಲ್ಡೌನ್ ಬಗ್ಗೆ ನಿರ್ಧರಿಸುವುದಾಗಿ ತಹಶೀಲ್ದಾರ್ ಹೇಳಿ ಸಭೆ ಮುಕ್ತಾಯಗೊಳಿಸಿದರು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಎಸ್.ಆರ್.ನಿಂಗಪ್ಪ, ಪುರಸಭೆ ವ್ಯವಸ್ಥಾಪಕ ಪ್ರಹ್ಲಾದ ಜೋಷಿ ಇತರರು ಇದ್ದರು. ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಸದೆ ಸದಸ್ಯರು ಪರಸ್ಪರ ಕದನಕ್ಕೆ ಇಳಿದು ಸಮಯ ವ್ಯರ್ಥಮಾಡಿದರು ಎಂದು ಅಧಿಕಾರಿಯೊಬ್ಬರು ನಂತರ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>