ತಾಲ್ಲೂಕಿನ ಬೂದಗುಂಪಾ-ಶೇಷಗಿರಿ ಕ್ಯಾಂಪ್ ಮಧ್ಯೆ ಇರುವ ಉಳೇನೂರ ಏತನೀರಾವರಿ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಅಧಿಕಾರಿಗಳಿಂದ ವಿವರ ಪಡೆದ ಬಳಿಕ ಅವರು ಮಾತನಾಡಿದರು. ರೈತ ವರ್ಗಕ್ಕೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯಲಿ ಎಂಬ ಸದಾಶಯದಿಂದ ಯೋಜನೆ ಕಾರ್ಯಗತಗೊಂಡಿದ್ದು, ಅಧಿಕಾರಿಗಳು ಮುತುವರ್ಜಿ ವಹಿಸಿ ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದರು. ಎಂಜಿನಿಯರ್ಗಳಾದ ಹರೀಶ್, ಸೂಗಪ್ಪ, ನಾಗಪ್ಪ ಪ್ರಮುಖರಾದ ವೀರೇಶ ಸಾಲೊಣಿ, ವಿಶ್ವನಾಥ ಮೈಲಾಪುರ, ರುದ್ರಗೌಡ ನಂದಿಹಳ್ಳಿ, ಅಮರಗುಂಡಪ್ಪ ಕನಕಗಿರಿ, ಬಸವರಾಜ ಬಿಲ್ಗಾರ, ಬಸವರಾಜಪ್ಪ, ತಿಮ್ಮಣ್ಣ, ಪರಮೇಶಪ್ಪ, ಶರಣಪ್ಪ, ಮುದುಕನಗೌಡ, ಭಾರತೇಶ, ರಂಗಪ್ಪ ಹಾಗೂ ಅಂಬಣ್ಣ ಇದ್ದರು.