ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ’

Last Updated 9 ಮೇ 2021, 5:28 IST
ಅಕ್ಷರ ಗಾತ್ರ

ಬೂದಗುಂಪಾ (ಕಾರಟಗಿ):‌ ‘ಉಳೇನೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಶಾಸಕ ಬಸವರಾಜ ದಢೇಸೂಗೂರು ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕಿನ ಬೂದಗುಂಪಾ-ಶೇಷಗಿರಿ ಕ್ಯಾಂಪ್‌ ಮಧ್ಯೆ ಇರುವ ಉಳೇನೂರ ಏತನೀರಾವರಿ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಅಧಿಕಾರಿಗಳಿಂದ ವಿವರ ಪಡೆದ ಬಳಿಕ ಅವರು ಮಾತನಾಡಿದರು. ರೈತ ವರ್ಗಕ್ಕೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯಲಿ ಎಂಬ ಸದಾಶಯದಿಂದ ಯೋಜನೆ ಕಾರ್ಯಗತಗೊಂಡಿದ್ದು, ಅಧಿಕಾರಿಗಳು ಮುತುವರ್ಜಿ ವಹಿಸಿ ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದರು. ಎಂಜಿನಿಯರ್‌ಗಳಾದ ಹರೀಶ್, ಸೂಗಪ್ಪ, ನಾಗಪ್ಪ ಪ್ರಮುಖರಾದ ವೀರೇಶ ಸಾಲೊಣಿ, ವಿಶ್ವನಾಥ ಮೈಲಾಪುರ, ರುದ್ರಗೌಡ ನಂದಿಹಳ್ಳಿ, ಅಮರಗುಂಡಪ್ಪ ಕನಕಗಿರಿ, ಬಸವರಾಜ ಬಿಲ್ಗಾರ, ಬಸವರಾಜಪ್ಪ, ತಿಮ್ಮಣ್ಣ, ಪರಮೇಶಪ್ಪ, ಶರಣಪ್ಪ, ಮುದುಕನಗೌಡ, ಭಾರತೇಶ, ರಂಗಪ್ಪ ಹಾಗೂ ಅಂಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT