<p><strong>ಕನಕಗಿರಿ</strong>: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಹಾಗೂ ಇವಿಎಂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬುಧವಾರ ನಡೆಯಿತು.<br> ತಾಲ್ಲೂಕು ಐಇಸಿ ಸಂಯೋಜಕ ಶಿವಕುಮಾರ ಮಾತನಾಡಿ, ‘18 ವರ್ಷಕ್ಕಿಂತ ಮೇಲಿನವರು ಮತದಾರರ ಪಟ್ಟಿಯಲ್ಲಿ ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು.</p><p>ಮತದಾನದ ಹಕ್ಕನ್ನು ಎಲ್ಲರೂ ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದರು. ನಂತರ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು. </p><p>ಇದೇ ವೇಳೆ ಅಂಧ ಮತದಾರರೊಬ್ಬರು ಬ್ಯಾಲೆಟ್ ಯೂನಿಟ್ನಲ್ಲಿ ಬ್ರೈಲ್ ಲಿಪಿಯನ್ನು ಸ್ಪರ್ಶಿಸುವ ಮೂಲಕ ಮತವನ್ನು ಚಲಾಯಿಸಿದ್ದು, ಗಮನ ಸೆಳೆಯಿತು.</p><p>ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರವಿ ನಾಯಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯರಾದ ರಾಜಸಾಬ ಕಟ್ಟಿಮನಿ, ಗ್ರಾಮದ ಮುಖಂಡರಾದ ಯಮನೂರಪ್ಪ ಕೆಲೂರ್, ಭೀಮಣ್ಣ ಹೂಗಾರ ಮತ್ತಿತರರು ಹಾಜರಿದ್ದರು.</p><p>ಎಂಬಿಕೆ, ಕೃಷಿ, ಪಶು ಸಖಿಯರಿಗೆ ಮತದಾನ ಜಾಗೃತಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎನ್ಆರ್ಎಲ್ಎಂ ವಿಭಾಗದಿಂದ ನಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಎರಡು ದಿನದ ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.</p><p>ತಾ.ಪಂ ವಿಷಯ ನಿರ್ವಾಹಕ ಕೋಟ್ರಯ್ಯಸ್ವಾಮಿ,ಎನ್ಆರ್ಎಲ್ಎಂ ಸಂಯೋಜಕಿ ರೇಣುಕಾ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ</strong>: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಹಾಗೂ ಇವಿಎಂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬುಧವಾರ ನಡೆಯಿತು.<br> ತಾಲ್ಲೂಕು ಐಇಸಿ ಸಂಯೋಜಕ ಶಿವಕುಮಾರ ಮಾತನಾಡಿ, ‘18 ವರ್ಷಕ್ಕಿಂತ ಮೇಲಿನವರು ಮತದಾರರ ಪಟ್ಟಿಯಲ್ಲಿ ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು.</p><p>ಮತದಾನದ ಹಕ್ಕನ್ನು ಎಲ್ಲರೂ ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದರು. ನಂತರ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು. </p><p>ಇದೇ ವೇಳೆ ಅಂಧ ಮತದಾರರೊಬ್ಬರು ಬ್ಯಾಲೆಟ್ ಯೂನಿಟ್ನಲ್ಲಿ ಬ್ರೈಲ್ ಲಿಪಿಯನ್ನು ಸ್ಪರ್ಶಿಸುವ ಮೂಲಕ ಮತವನ್ನು ಚಲಾಯಿಸಿದ್ದು, ಗಮನ ಸೆಳೆಯಿತು.</p><p>ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರವಿ ನಾಯಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯರಾದ ರಾಜಸಾಬ ಕಟ್ಟಿಮನಿ, ಗ್ರಾಮದ ಮುಖಂಡರಾದ ಯಮನೂರಪ್ಪ ಕೆಲೂರ್, ಭೀಮಣ್ಣ ಹೂಗಾರ ಮತ್ತಿತರರು ಹಾಜರಿದ್ದರು.</p><p>ಎಂಬಿಕೆ, ಕೃಷಿ, ಪಶು ಸಖಿಯರಿಗೆ ಮತದಾನ ಜಾಗೃತಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎನ್ಆರ್ಎಲ್ಎಂ ವಿಭಾಗದಿಂದ ನಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಎರಡು ದಿನದ ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.</p><p>ತಾ.ಪಂ ವಿಷಯ ನಿರ್ವಾಹಕ ಕೋಟ್ರಯ್ಯಸ್ವಾಮಿ,ಎನ್ಆರ್ಎಲ್ಎಂ ಸಂಯೋಜಕಿ ರೇಣುಕಾ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>