ಕೊಲೆ ಆರೋಪಿ ವೆಂಕಟೇಶ ಚಿಗರಿ ಮತ್ತು ಕೃತ್ಯಕ್ಕೆ ಪ್ರಚೋದಿಸಿದ ಲಕ್ಷ್ಮವ್ವ ಚಿಗರಿ ಎಂಬುವರನ್ನು ಬಂಧಿಸಲಾಗಿದೆ. ನಿತ್ಯವೂ ಉಪಾಹಾರವನ್ನು ಉದ್ರಿ ರೂಪದಲ್ಲಿ ಕೊಡಲು ವೆಂಕಟೇಶ, ಶೇಖರಗೌಡಗೆ ಬೆದರಿಕೆ ಹಾಕುತ್ತಿದ್ದ. ಸೋಮವಾರ ಸಂಜೆ ಮತ್ತೆ ಜಗಳವಾಗಿ, ವೆಂಕಟೇಶ ಹಲ್ಲೆ ಮಾಡಿದ. ತೀವ್ರವಾಗಿ ಗಾಯಗೊಂಡ ಶೇಖರಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟರು’ ಎಂದು ತಾವರಗೇರಾ ಠಾಣೆ ಪೊಲೀಸರು ತಿಳಿಸಿದ್ದಾರೆ.