<p>ಕೊಪ್ಪಳ: ಸೇವಾ ನ್ಯೂನ್ಯತೆ ಎಸಗಿದ ಕಾರಣಕ್ಕಾಗಿ ಗ್ರಾಹಕರಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.</p>.<p>ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್ ಗ್ರಾಮದ ಮಮತಾ ಎಸ್. ಕಲಿಗೌಡ್ರು ಅವರು ತಮ್ಮೂರಿನ ಬಿವಿಎಸ್ ಮೋಟರ್ಸ್ನಲ್ಲಿ ₹84,000ಕ್ಕೆ ದ್ವಿಚಕ್ರ ವಾಹನ ಖರೀದಿಸಿದ್ದರು. 2022ರ ಸೆಪ್ಟೆಂಬರ್ನಲ್ಲಿ ಬ್ಯಾಟರಿ ಬ್ಯಾಕಪ್ ದುರಸ್ತಿ ಕೆಲಸಕ್ಕಾಗಿ ಶೋರೂಮ್ನಲ್ಲಿ ವಾಹನವನ್ನು ಬಿಟ್ಟಿದ್ದು, ಕೆಲವು ದಿನಗಳಲ್ಲಿ ವಾಪಸ್ ಕೊಡುವುದಾಗಿ ಮೌಖಿಕವಾಗಿ ಅಂಗಡಿ ಮಾಲೀಕ ಹೇಳಿದ್ದರು. ಗ್ರಾಹಕ ಮರಳಿ ಶೋ ರೂಂಗೆ ಹೋದಾಗ ಆ ಅಂಗಡಿ ಸಂಪೂರ್ಣವಾಗಿ ಬಂದ್ ಆಗಿದೆ. ಅಂಗಡಿಯವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿಲ್ಲ. ಆದ್ದರಿಂದ ಗ್ರಾಹಕರು ಆಯೋಗದ ಮೊರೆ ಹೋಗಿದ್ದರು.</p>.<p>ದೂರು ದಾಖಲಿಸಿಕೊಂಡ ಆಯೋಗದಿಂದ ಎದುರುದಾರರಿಗೆ ನೋಟಿಸ್ ಕಳುಹಿಸಿದ್ದರೂ ಅಂಗಡಿಯ ಮಾಲೀಕ ಹಾಜರಾಗದ ಕಾರಣ ಏಕಪಕ್ಷೀಯವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ವಿಚಾರಣೆ ನಡೆಸಿ ಸೇವಾ ದೋಷ ಆಗಿದೆ ಎಂದು ಆದೇಶ ನೀಡಿದ್ದಾರೆ.</p>.<p>ಶೋ ರೂಂನವರು ಗ್ರಾಹಕರಿಗೆ ವಾಹನ ದುರಸ್ತಿ ಮಾಡಿಕೊಡಬೇಕು. ಇಲ್ಲವಾದರೆ ವಾಹನದ ಮೌಲ್ಯದ ₹84 ಸಾವಿರಕ್ಕೆ ಶೇ. 15ರಷ್ಟು ವಾಹನ ಉಪಯೋಗಿಸಿದ ಸವಕಳಿ ಮೊತ್ತ ಕಡಿತಗೊಳಿಸಿ ₹71,400 ಪಾವತಿ ಮಾಡಬೇಕು. ಗ್ರಾಹಕರಿಗಾದ ಮಾನಸಿಕ ಯಾತನೆಗಾಗಿ ₹10 ಸಾವಿರ ಹಾಗೂ ದೂರಿನ ಖರ್ಚು ₹5 ಸಾವಿರವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ಸೇವಾ ನ್ಯೂನ್ಯತೆ ಎಸಗಿದ ಕಾರಣಕ್ಕಾಗಿ ಗ್ರಾಹಕರಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.</p>.<p>ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್ ಗ್ರಾಮದ ಮಮತಾ ಎಸ್. ಕಲಿಗೌಡ್ರು ಅವರು ತಮ್ಮೂರಿನ ಬಿವಿಎಸ್ ಮೋಟರ್ಸ್ನಲ್ಲಿ ₹84,000ಕ್ಕೆ ದ್ವಿಚಕ್ರ ವಾಹನ ಖರೀದಿಸಿದ್ದರು. 2022ರ ಸೆಪ್ಟೆಂಬರ್ನಲ್ಲಿ ಬ್ಯಾಟರಿ ಬ್ಯಾಕಪ್ ದುರಸ್ತಿ ಕೆಲಸಕ್ಕಾಗಿ ಶೋರೂಮ್ನಲ್ಲಿ ವಾಹನವನ್ನು ಬಿಟ್ಟಿದ್ದು, ಕೆಲವು ದಿನಗಳಲ್ಲಿ ವಾಪಸ್ ಕೊಡುವುದಾಗಿ ಮೌಖಿಕವಾಗಿ ಅಂಗಡಿ ಮಾಲೀಕ ಹೇಳಿದ್ದರು. ಗ್ರಾಹಕ ಮರಳಿ ಶೋ ರೂಂಗೆ ಹೋದಾಗ ಆ ಅಂಗಡಿ ಸಂಪೂರ್ಣವಾಗಿ ಬಂದ್ ಆಗಿದೆ. ಅಂಗಡಿಯವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿಲ್ಲ. ಆದ್ದರಿಂದ ಗ್ರಾಹಕರು ಆಯೋಗದ ಮೊರೆ ಹೋಗಿದ್ದರು.</p>.<p>ದೂರು ದಾಖಲಿಸಿಕೊಂಡ ಆಯೋಗದಿಂದ ಎದುರುದಾರರಿಗೆ ನೋಟಿಸ್ ಕಳುಹಿಸಿದ್ದರೂ ಅಂಗಡಿಯ ಮಾಲೀಕ ಹಾಜರಾಗದ ಕಾರಣ ಏಕಪಕ್ಷೀಯವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ವಿಚಾರಣೆ ನಡೆಸಿ ಸೇವಾ ದೋಷ ಆಗಿದೆ ಎಂದು ಆದೇಶ ನೀಡಿದ್ದಾರೆ.</p>.<p>ಶೋ ರೂಂನವರು ಗ್ರಾಹಕರಿಗೆ ವಾಹನ ದುರಸ್ತಿ ಮಾಡಿಕೊಡಬೇಕು. ಇಲ್ಲವಾದರೆ ವಾಹನದ ಮೌಲ್ಯದ ₹84 ಸಾವಿರಕ್ಕೆ ಶೇ. 15ರಷ್ಟು ವಾಹನ ಉಪಯೋಗಿಸಿದ ಸವಕಳಿ ಮೊತ್ತ ಕಡಿತಗೊಳಿಸಿ ₹71,400 ಪಾವತಿ ಮಾಡಬೇಕು. ಗ್ರಾಹಕರಿಗಾದ ಮಾನಸಿಕ ಯಾತನೆಗಾಗಿ ₹10 ಸಾವಿರ ಹಾಗೂ ದೂರಿನ ಖರ್ಚು ₹5 ಸಾವಿರವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>