ಗಂಗಾವತಿ ಕ್ಷೇತ್ರದಲ್ಲಿ ರಾಮಾಯಣ, ವಿಜಯನಗರ ಸಾಮ್ರಾಜ್ಯ ಕಾಲಕ್ಕೆ ಸಂಬಂಧಿಸಿದ ಮಂಟಪ, ದೇವಸ್ಥಾನ, ಕೋಟೆಗಳಿದ್ದು, ಇವುಗಳ ಇತಿಹಾಸ ತಿಳಿಸುವುದರ ಜತೆಗೆ ಮತದಾನ ಜಾಗೃತಿ ಮೂಡಿಸಲು ಶಾಲೆಯ ಗೊಡೆಗಳಿಗೆ ಚಿತ್ರಗಳು ಬಿಡಿಸಲಾಗಿದೆ. ಮತಗಟ್ಟೆ ಗೋಡೆಗಳ ಮೇಲೆ ಹಿರೇಬೆಣಕಲ್ನ ಮೋರೆರ ಬೆಟ್ಟ, ಆನೆಗೊಂದಿ 64 ಸಾಲಿನ ಮಂಟಪ, ಗಗನಮಹಲ್, ಆನೆಗೊಂದಿ ಕೋಟೆ (ವಾಲಿಕಿಲ್ಲಾ) ಚಿತ್ರಗಳನ್ನು ಅತ್ಯಾಕರ್ಷಕವಾಗಿ ಬಿಡಿಸಲಾಗಿದೆ.