ಏಕೈಕ ಕೇಂದ್ರ
ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ನಾಡಕಚೇರಿಯ ಉಪತಹಶೀಲ್ದಾರ್ ರೇಖಾ ದೀಕ್ಷಿತ್, ‘ಹೋಬಳಿಯಲ್ಲಿರುವ ಆಧಾರ್ ತಿದ್ದುಪಡಿಯ ಇದು ಏಕೈಕ ಕೇಂದ್ರ ಇದಾಗಿದೆ. ಸರ್ಕಾರದ ಯೋಜನೆಗೆ ಆಧಾರ್ ಜೋಡಣೆ ಕಡ್ಡಾಯ ಇರುವುದರಿಂದ ಸಣ್ಣ ಪುಟ್ಟ ಬದಲಾವಣೆಗೆ ಸಾರ್ವಜನಿಕರು ಏಕಕಾಲಕ್ಕೆ ಬರುತ್ತಿದ್ದಾರೆ. ಕಳೆದೊಂದು ವಾರದಿಂದ ಸಮಸ್ಯೆ ಆಗಿದೆ. ಕೇವಲ ಹತ್ತತ್ತು ಜನರಂತೆ ತಂಡ ಮಾಡಿ ಒಳಗೆ ಕರೆದು ಕೆಲಸ ಮಾಡಿಕೊಡುತ್ತಿದ್ದೇವೆ. ನಮ್ಮ ಸಿಬ್ಬಂದಿ ದಿನವೂ ಬಿಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಕೇವಲ ಒಬ್ಬ ಆಪರೇಟರ್ ಇದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತಿದ್ದೇವೆ’ ಎಂದು ತಿಳಿಸಿದರು.