ಆಗಿದ್ದೇನು: ‘ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಜಿ.ಗಂಗನಾಳ ಗ್ರಾಮದ ಯಮನೂರಪ್ಪ ಎಂಬುವರು ಸಾಕ್ಷಿಯಾಗಿದ್ದರು. ಆದರೆ, ಕೋರ್ಟ್ಗೆ ಹಾಜರಾಗದ ಕಾರಣ ವಾರಂಟ್ ಹೊರಡಿಸಲಾಗಿತ್ತು. ಶನಿವಾರ ಬೆಳಿಗ್ಗೆ ಯಮನೂರಪ್ಪ ಅವರನ್ನು ಕರೆಸಿಕೊಳ್ಳಲಾಗಿತ್ತು. ಆದರೆ, ವಿನಾಕಾರಣ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿದೆಯೆಂದು ಯಮನೂರಪ್ಪ ಪೊಲೀಸರಿಗೆ ನಿಂದಿಸಿದರು’ ಎಂದು ಪೊಲೀಸರು ಘಟನೆ
ವಿವರಿಸಿದರು.