ರಾಜಸ್ಥಾನದ ಗಂಗಾನಗರದ ಎಸ್ಪಿಯಾಗಿರುವ ರಮೇಶ ಕಂದಕೂರ ಮಾತನಾಡಿ ‘ಗವಿಮಠ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಬಡವರ ಸೇವೆ, ಧರ್ಮದ ಬೆಳಕನ್ನು ತೋರಿದೆ. ಗ್ರಾಮೀಣ ಪ್ರದೇಶದ ಓದಿದ ನಾನು, ಬಡತನದಿಂದ ಬೆಳೆದು ನಾನಾ ಸವಾಲುಗಳನ್ನು ಎದುರಿಸಿದ್ದೇನೆ. ಇವೆಲ್ಲವುಗಳಿಂದ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎನ್ನುವ ಪಾಠ ಕಲಿತಿದ್ದೇನೆ’ ಎಂದರು.