<p><strong>ಕೊಪ್ಪಳ:</strong>ಅಂತರ ಕಾಪಾಡಲು ಸರ್ಕಾರ ಸಾಮಾಜಿಕ ಜಾಗೃತಿ ಮೂಡಿಸಲುಮಾಧ್ಯಮಗಳ ಮೂಲಕ ಪ್ರತಿನಿತ್ಯ ಬಗೆಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಈವರೆಗೆ ಹಲವಾರು ವಿಧದ ಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಒಳಗಾಗಿವೆ. ಇನ್ನೂ ಕೆಲವು ಟೀಕೆಗೂ ಗುರಿಯಾಗಿವೆ.</p>.<p>ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಹೆಚ್ಚು ಜನ ಭೇಟಿ ನೀಡುವ ಅಂಗಡಿಗಳು, ಕಚೇರಿಗಳ ಹೊರಗೆ ಸಾಮಾನ್ಯವಾಗಿ ನೆಲದಲ್ಲಿ ಮೂರು ಅಡಿಗೊಂದರಂತೆ ಬಾಕ್ಸ್ಗಳ ಚಿತ್ರ ಬರೆಯುತ್ತಾರೆ. ಜನ ಆ ಬಾಕ್ಸಿನಲ್ಲಿ ನಿಂತು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ನೆಲದಡಿ ತೊಟ್ಟಿ ನಿರ್ಮಿಸಲು ಬಳಕೆಯಾಗುವ ಸಿಮೆಂಟ್ ರಿಂಗ್ಗಳನ್ನು ಕಚೇರಿಯ ಒಳಗೇ ಹಾಕಿಸಿ, ಸಾಮಾಜಿಕ ಅಂತರ ಕಾಪಾಡುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.</p>.<p>ಕೊಪ್ಪಳ ಜಿಲ್ಲೆಯ ಉಪನೊಂದಣಾಧಿಕಾರಿ ಕಚೇರಿ ಅಧಿಕಾರಿ ರುದ್ರಮೂರ್ತಿ ಅಂತರ ಕಾಪಾಡುವ ನಿಟ್ಟಿನಲ್ಲಿ ಬೃಹತ್ ಗಾತ್ರದ ಸಿಮೆಂಟ್ ರಿಂಗ್ಗಳನ್ನು ತಮ್ಮ ಕಚೇರಿಯಲ್ಲಿ ಹಾಕಿಸಿದ್ದಾರೆ. ಇದರಿಂದ ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಈ ಕಚೇರಿಗೆ ಭೇಟಿ ನೀಡುವ ಜನರು ಮೊಣಕಾಲುದ್ದದ ರಿಂಗುಗಳಲ್ಲಿ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.</p>.<p>ಸದಾ ಜನರಿಂದ ತುಂಬಿರುವ ಈ ಕಚೇರಿಯಲ್ಲಿ ಉಪನೊಂದಣಾಧಿಕಾರಿತಮ್ಮ ಚೇಂಬರ್ನಿಂದ ಕಛೇರಿಯ ಹೊರಹೋಗುವವರೆಗೂ ಸಾಲಾಗಿ ಇಂತಹ ಸಿಮೆಂಟ್ ರಿಂಗುಗಳನ್ನು ಹಾಕಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು ಅವರ ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಆದರೆ ಇದರಿಂದ ವಯಸ್ಸಾದವರು, ಅಂಗವಿಕಲರು, ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.</p>.<p>ಸಾರ್ವಜನಿಕರು ಈ ರಿಂಗುಗಳನ್ನು ದಾಟಲಾಗದೆ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿರುವ ಈ ಕ್ರಮವನ್ನು ಸರ್ಕಾರಿ ಅಧಿಕಾರಿ ಮುಂದುವರೆಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong>ಅಂತರ ಕಾಪಾಡಲು ಸರ್ಕಾರ ಸಾಮಾಜಿಕ ಜಾಗೃತಿ ಮೂಡಿಸಲುಮಾಧ್ಯಮಗಳ ಮೂಲಕ ಪ್ರತಿನಿತ್ಯ ಬಗೆಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಈವರೆಗೆ ಹಲವಾರು ವಿಧದ ಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಒಳಗಾಗಿವೆ. ಇನ್ನೂ ಕೆಲವು ಟೀಕೆಗೂ ಗುರಿಯಾಗಿವೆ.</p>.<p>ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಹೆಚ್ಚು ಜನ ಭೇಟಿ ನೀಡುವ ಅಂಗಡಿಗಳು, ಕಚೇರಿಗಳ ಹೊರಗೆ ಸಾಮಾನ್ಯವಾಗಿ ನೆಲದಲ್ಲಿ ಮೂರು ಅಡಿಗೊಂದರಂತೆ ಬಾಕ್ಸ್ಗಳ ಚಿತ್ರ ಬರೆಯುತ್ತಾರೆ. ಜನ ಆ ಬಾಕ್ಸಿನಲ್ಲಿ ನಿಂತು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ನೆಲದಡಿ ತೊಟ್ಟಿ ನಿರ್ಮಿಸಲು ಬಳಕೆಯಾಗುವ ಸಿಮೆಂಟ್ ರಿಂಗ್ಗಳನ್ನು ಕಚೇರಿಯ ಒಳಗೇ ಹಾಕಿಸಿ, ಸಾಮಾಜಿಕ ಅಂತರ ಕಾಪಾಡುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.</p>.<p>ಕೊಪ್ಪಳ ಜಿಲ್ಲೆಯ ಉಪನೊಂದಣಾಧಿಕಾರಿ ಕಚೇರಿ ಅಧಿಕಾರಿ ರುದ್ರಮೂರ್ತಿ ಅಂತರ ಕಾಪಾಡುವ ನಿಟ್ಟಿನಲ್ಲಿ ಬೃಹತ್ ಗಾತ್ರದ ಸಿಮೆಂಟ್ ರಿಂಗ್ಗಳನ್ನು ತಮ್ಮ ಕಚೇರಿಯಲ್ಲಿ ಹಾಕಿಸಿದ್ದಾರೆ. ಇದರಿಂದ ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಈ ಕಚೇರಿಗೆ ಭೇಟಿ ನೀಡುವ ಜನರು ಮೊಣಕಾಲುದ್ದದ ರಿಂಗುಗಳಲ್ಲಿ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.</p>.<p>ಸದಾ ಜನರಿಂದ ತುಂಬಿರುವ ಈ ಕಚೇರಿಯಲ್ಲಿ ಉಪನೊಂದಣಾಧಿಕಾರಿತಮ್ಮ ಚೇಂಬರ್ನಿಂದ ಕಛೇರಿಯ ಹೊರಹೋಗುವವರೆಗೂ ಸಾಲಾಗಿ ಇಂತಹ ಸಿಮೆಂಟ್ ರಿಂಗುಗಳನ್ನು ಹಾಕಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು ಅವರ ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಆದರೆ ಇದರಿಂದ ವಯಸ್ಸಾದವರು, ಅಂಗವಿಕಲರು, ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.</p>.<p>ಸಾರ್ವಜನಿಕರು ಈ ರಿಂಗುಗಳನ್ನು ದಾಟಲಾಗದೆ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿರುವ ಈ ಕ್ರಮವನ್ನು ಸರ್ಕಾರಿ ಅಧಿಕಾರಿ ಮುಂದುವರೆಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>