ಗಂಗಾವತಿ ತಾಲ್ಲೂಕಿನ ನವವೃಂದಾವನ ಗಡ್ಡೆಯಲ್ಲಿ ರಾಯರ ಮಠದ ಸ್ವಾಮೀಜಿ ಭಕ್ತರೊಂದಿಗೆ ಸಂಭ್ರಮಾಚರಣೆ ಮಾಡಿದ ಕ್ಷಣ
ಅರ್ಜಿ ವಜಾ ಆಗಿದೆ: ಸ್ವಾಮೀಜಿ
ಸುಬುಧೇಂದ್ರ ತೀರ್ಥರು ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ‘ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಕವೀಂದ್ರತೀರ್ಥರ ವಾಗೀಶ ತೀರ್ಥರಬೃಂದಾವನಗಳಿಗೆ ಪೂಜೆಸಲ್ಲಿಸದಂತೆ ಉತ್ತರಾದಿಮಠದವರು ರಾಯರ ಮಠದ ವಿರುದ್ಧ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಮುಂದೆ ಹೈಕೋರ್ಟ್ನ ಧಾರವಾಡ ಪೀಠಕ್ಕೆ ವರ್ಗಾವಣೆಯಾಗಿತ್ತು. ತದನಂತರ ಹಲವು ಬಾರಿ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುತ್ತಾ ಸಾಗಿ ಇದೀಗ ನ್ಯಾಯಾಲಯ ರಾಯರಮಠದ ವಿರುದ್ಧ ಉತ್ತರಾಧಿಮಠ ನವವೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡದಂತೆ ಹೂಡಿದ ದಾವೆಯನ್ನು ವಜಾಗೊಳಿಸಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದು ತಿಳಿಸಿದರು.