<p><strong>ಕುಕನೂರು: ‘</strong>ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್ಗಳ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು’ ಎಂದು ಅಧ್ಯಕ್ಷ ಶಂಭು ಜೋಳದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಆಡಳಿತ ನಡೆಸಿದವರ ಕುರಿತು ನನಗೆ ಹೇಳಬೇಡಿ.<br />ನಾನು ಬಂದ ಮೇಲೆ ಈಗಾಗಲೇ ಲೈಟ್ ಹಾಕಿಸಿದ್ದೇನೆ. ಕಚೇರಿಗೆ ಬಣ್ಣ ಬಳಿಸಲಾಗಿದೆ. ಹೈಟೆಕ್ ಶೌಚಾಲಯದ ಆವರಣವನ್ನು ಸ್ವಚ್ಚ ಮಾಡಲಾಗಿದೆ. ಪಟ್ಟಣದ ಎಲ್ಲ 19 ವಾರ್ಡ್ಗಳ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ತಲಾ ₹1 ಲಕ್ಷದಂತೆ ₹19 ಲಕ್ಷ ನೀಡಬೇಕು’ ಎಂದು ಹೇಳಿದರು.</p>.<p>ಸಿಬ್ಬಂದಿ ಎಲ್ಲ ವಾರ್ಡ್ಗಳಲ್ಲಿ ಚರಂಡಿ ಸ್ವಚ್ಛ ಮಾಡಬೇಕು. ಕಸ ವಿಲೇವಾರಿ ಮಾಡಬೇಕು. ಕೆಲವು ಸಿಬ್ಬಂದಿಗೆ ವೇತನ ನೀಡಿಲ್ಲ. ಎಲ್ಲರಿಗೂ ಈ ತಿಂಗಳು ₹10 ಸಾವಿರ ವೇತನ ನೀಡಬೇಕು. ಜವಳದ ಕಾಲೊನಿಯ ಆಂಜನೇಯ ದೇವಸ್ಥಾನಕ್ಕೆ ದಾಖಲಾತಿ ನೀಡಬೇಕು. ಪಟ್ಟಣದಲ್ಲಿ ಚರಂಡಿ ನಿರ್ಮಿಸಿದ ಗುತ್ತಿಗೆದಾರನಿಗೆ ನೋಟಿಸ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾರಾಟ ಮಳಿಗೆ ನಿರ್ಮಿಸಲು ₹4 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.</p>.<p>ಮುಖ್ಯಾಧಿಕಾರಿ ಶ್ರೀಶೈಲ್ಗೌಡ ಸಂಕನಗೌಡ, ಉಪಾಧ್ಯಕ್ಷೆ ಗೀತಾ ಜಂಗ್ಲಿ, ಹನುಮಯ್ಯ ಹಂಪನಾಳ, ಮೃತ್ಯುಂಜಯ್ಯ ಕಂಪ್ಲಿ, ಮಹೇಶ ಕವಲೂರು, ಕನಕಪ್ಪ ಬ್ಯಾಡರ್, ಬಸವರಾಜ ಅಡವಿ, ಸಿರಾಜ್ ಕರಮುಡಿ, ರೇಹಮಾನಸಾಬ ಮಕ್ಕಪ್ಪನವರ್, ರತ್ನವ್ವ ಪಲ್ಲೆದ್, ವಿಜಯಲಕ್ಷ್ಮಿ ಬಿನ್ನಾಳ, ಎಮ್ ನೋಟಗಾರ, ನಾಗಮ್ಮ ಗಡ್ಡದವರ್, ನೇತ್ರಾವತಿ ಬಂಡಿ, ಯಲ್ಲಪ್ಪ ಕಲ್ಮನಿ ಹಾಗೂ ಶಾಂತಲಾ ಬಂಕದಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು: ‘</strong>ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್ಗಳ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು’ ಎಂದು ಅಧ್ಯಕ್ಷ ಶಂಭು ಜೋಳದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು.</p>.<p>‘ಈ ಹಿಂದೆ ಆಡಳಿತ ನಡೆಸಿದವರ ಕುರಿತು ನನಗೆ ಹೇಳಬೇಡಿ.<br />ನಾನು ಬಂದ ಮೇಲೆ ಈಗಾಗಲೇ ಲೈಟ್ ಹಾಕಿಸಿದ್ದೇನೆ. ಕಚೇರಿಗೆ ಬಣ್ಣ ಬಳಿಸಲಾಗಿದೆ. ಹೈಟೆಕ್ ಶೌಚಾಲಯದ ಆವರಣವನ್ನು ಸ್ವಚ್ಚ ಮಾಡಲಾಗಿದೆ. ಪಟ್ಟಣದ ಎಲ್ಲ 19 ವಾರ್ಡ್ಗಳ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ತಲಾ ₹1 ಲಕ್ಷದಂತೆ ₹19 ಲಕ್ಷ ನೀಡಬೇಕು’ ಎಂದು ಹೇಳಿದರು.</p>.<p>ಸಿಬ್ಬಂದಿ ಎಲ್ಲ ವಾರ್ಡ್ಗಳಲ್ಲಿ ಚರಂಡಿ ಸ್ವಚ್ಛ ಮಾಡಬೇಕು. ಕಸ ವಿಲೇವಾರಿ ಮಾಡಬೇಕು. ಕೆಲವು ಸಿಬ್ಬಂದಿಗೆ ವೇತನ ನೀಡಿಲ್ಲ. ಎಲ್ಲರಿಗೂ ಈ ತಿಂಗಳು ₹10 ಸಾವಿರ ವೇತನ ನೀಡಬೇಕು. ಜವಳದ ಕಾಲೊನಿಯ ಆಂಜನೇಯ ದೇವಸ್ಥಾನಕ್ಕೆ ದಾಖಲಾತಿ ನೀಡಬೇಕು. ಪಟ್ಟಣದಲ್ಲಿ ಚರಂಡಿ ನಿರ್ಮಿಸಿದ ಗುತ್ತಿಗೆದಾರನಿಗೆ ನೋಟಿಸ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾರಾಟ ಮಳಿಗೆ ನಿರ್ಮಿಸಲು ₹4 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.</p>.<p>ಮುಖ್ಯಾಧಿಕಾರಿ ಶ್ರೀಶೈಲ್ಗೌಡ ಸಂಕನಗೌಡ, ಉಪಾಧ್ಯಕ್ಷೆ ಗೀತಾ ಜಂಗ್ಲಿ, ಹನುಮಯ್ಯ ಹಂಪನಾಳ, ಮೃತ್ಯುಂಜಯ್ಯ ಕಂಪ್ಲಿ, ಮಹೇಶ ಕವಲೂರು, ಕನಕಪ್ಪ ಬ್ಯಾಡರ್, ಬಸವರಾಜ ಅಡವಿ, ಸಿರಾಜ್ ಕರಮುಡಿ, ರೇಹಮಾನಸಾಬ ಮಕ್ಕಪ್ಪನವರ್, ರತ್ನವ್ವ ಪಲ್ಲೆದ್, ವಿಜಯಲಕ್ಷ್ಮಿ ಬಿನ್ನಾಳ, ಎಮ್ ನೋಟಗಾರ, ನಾಗಮ್ಮ ಗಡ್ಡದವರ್, ನೇತ್ರಾವತಿ ಬಂಡಿ, ಯಲ್ಲಪ್ಪ ಕಲ್ಮನಿ ಹಾಗೂ ಶಾಂತಲಾ ಬಂಕದಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>