ಸಾಮಾನ್ಯ ದಿನಗಳಲ್ಲಿ ಕೋತಿಗಳು ಇಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರ ತಿನ್ನುತ್ತಿದ್ದವು. ಲಾಕ್ಡೌನ್ ಕಾರಣ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ಪರದಾಡುತ್ತಿದ್ದವು. ತಹಶೀಲ್ದಾರ್ ನಾಗರಾಜ ನೇತೃತ್ವದ ತಂಡ ಆನೆಗೊಂದಿ ಸಮೀಪದ ಪಂಪಾ ಸರೋವರ ಹಾಗೂ ಅಂಜನಾದ್ರಿ ಪರ್ವತ ಸಮೀಪ ಇದ್ದ ಕೋತಿಗಳಿಗೆ ಬಾಳೆಹಣ್ಣು, ಶೇಂಗಾ ಬೀಜ ನೀಡಿತು.