<p><strong>ಕಾರಟಗಿ</strong>: ಶ್ರೀಶೈಲದ ಸಾರಂಗಧರೇಶ್ವರ ಮಠದ ಸಾರಂಗ ಪೀಠದ ಅನ್ನದಾನ ಛತ್ರಕ್ಕೆ ಕಾರಟಗಿ ಹಾಗೂ ಸಿಂಧನೂರು ತಾಲ್ಲೂಕುಗಳ ವಿವಿಧ ಗ್ರಾಮಗಳ ಭಕ್ತರಿಂದ ಸಂಗ್ರಹಿಸಿದ್ದ 111 ಕ್ವಿಂಟಲ್ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಸೋಮವಾರ ರವಾನಿಸಲಾಯಿತು.</p>.<p>ಇಲ್ಲಿನ ಎಪಿಎಂಸಿ ಆವರಣದಲ್ಲಿ ಉದ್ಯಮಿಗಳು, ದಲಾಲಿ ವರ್ತಕರು ಹಾಗೂ ಭಕ್ತಾದಿಗಳು ಅಕ್ಕಿ ತುಂಬಿದ ಲಾರಿಗೆ ಪೂಜೆ ಸಲ್ಲಿಸಿ ಕಳುಹಿಸಿದರು.</p>.<p>ವರ್ತಕ ಬಸವರಾಜ ಕುಲಕರ್ಣಿ ಮಾತನಾಡಿ, ‘ಶ್ರೀಶೈಲ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ನಿಮಿತ್ತ ತೆರಳುವ ಸಾವಿರಾರು ಭಕ್ತರಿಗೆ ನಿತ್ಯವೂ ಸಾರಂಗಧರೇಶ್ವರ ಸಾರಂಗ ಪೀಠದ ಅನ್ನದಾನ ಛತ್ರದಲ್ಲಿ ದಾಸೋಹ ನಡೆಯುತ್ತದೆ. ನಿತ್ಯಾನ್ನದಾನದ ವ್ಯವಸ್ಥೆಗೆ ನಮ್ಮ ಭಾಗದ ಸೇವೆ ಎಂದು ಅಕ್ಕಿ ಹಾಗೂ 36 ಡಬ್ಬಿ ಒಳ್ಳೆಣ್ಣೆ, 2 ಕ್ವಿಂಟಲ್ ರವಾ, 2 ಕ್ವಿಂಟಲ್ ಬೆಲ್ಲ, 2 ಕ್ವಿಂಟಲ್ ತೊಗರಿಬೇಳೆ, 3 ಕ್ವಿಂಟಲ್ ಸಕ್ಕರೆ, 45 ಚೀಲ ಮಂಡಾಳ ಕಳುಹಿಸಲಾಯಿತು’ ಎಂದು ಹೇಳಿದರು.</p>.<p>ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಚಳ್ಳೂರು, ನಿವೃತ್ತ ಬ್ಯಾಂಕ್ ಅಧಿಕಾರಿ ಶರಣಬಸಯ್ಯ ಹಿರೇಮಠ ಪ್ರಮುಖರಾದ ಎಸ್. ತಿಮ್ಮಣ್ಣ ಹಾಲಸಮುದ್ರ, ಅಯ್ಯಪ್ಪ ಉಪ್ಪಾರ, ಮಲ್ಲಯ್ಯಸ್ವಾಮಿ ಹಂಚಿನಾಳಮಠ, ಕಲ್ಯಾಣಪ್ಪ ಚಿನಿವಾಲ, ಮಲ್ಲಿಕಾರ್ಜುನ ಹಂಚಿನಾಳಮಠ, ಹಣವಾಳ ವೀರಯ್ಯ ಇತರ ಭಕ್ತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ಶ್ರೀಶೈಲದ ಸಾರಂಗಧರೇಶ್ವರ ಮಠದ ಸಾರಂಗ ಪೀಠದ ಅನ್ನದಾನ ಛತ್ರಕ್ಕೆ ಕಾರಟಗಿ ಹಾಗೂ ಸಿಂಧನೂರು ತಾಲ್ಲೂಕುಗಳ ವಿವಿಧ ಗ್ರಾಮಗಳ ಭಕ್ತರಿಂದ ಸಂಗ್ರಹಿಸಿದ್ದ 111 ಕ್ವಿಂಟಲ್ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಸೋಮವಾರ ರವಾನಿಸಲಾಯಿತು.</p>.<p>ಇಲ್ಲಿನ ಎಪಿಎಂಸಿ ಆವರಣದಲ್ಲಿ ಉದ್ಯಮಿಗಳು, ದಲಾಲಿ ವರ್ತಕರು ಹಾಗೂ ಭಕ್ತಾದಿಗಳು ಅಕ್ಕಿ ತುಂಬಿದ ಲಾರಿಗೆ ಪೂಜೆ ಸಲ್ಲಿಸಿ ಕಳುಹಿಸಿದರು.</p>.<p>ವರ್ತಕ ಬಸವರಾಜ ಕುಲಕರ್ಣಿ ಮಾತನಾಡಿ, ‘ಶ್ರೀಶೈಲ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ನಿಮಿತ್ತ ತೆರಳುವ ಸಾವಿರಾರು ಭಕ್ತರಿಗೆ ನಿತ್ಯವೂ ಸಾರಂಗಧರೇಶ್ವರ ಸಾರಂಗ ಪೀಠದ ಅನ್ನದಾನ ಛತ್ರದಲ್ಲಿ ದಾಸೋಹ ನಡೆಯುತ್ತದೆ. ನಿತ್ಯಾನ್ನದಾನದ ವ್ಯವಸ್ಥೆಗೆ ನಮ್ಮ ಭಾಗದ ಸೇವೆ ಎಂದು ಅಕ್ಕಿ ಹಾಗೂ 36 ಡಬ್ಬಿ ಒಳ್ಳೆಣ್ಣೆ, 2 ಕ್ವಿಂಟಲ್ ರವಾ, 2 ಕ್ವಿಂಟಲ್ ಬೆಲ್ಲ, 2 ಕ್ವಿಂಟಲ್ ತೊಗರಿಬೇಳೆ, 3 ಕ್ವಿಂಟಲ್ ಸಕ್ಕರೆ, 45 ಚೀಲ ಮಂಡಾಳ ಕಳುಹಿಸಲಾಯಿತು’ ಎಂದು ಹೇಳಿದರು.</p>.<p>ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಚಳ್ಳೂರು, ನಿವೃತ್ತ ಬ್ಯಾಂಕ್ ಅಧಿಕಾರಿ ಶರಣಬಸಯ್ಯ ಹಿರೇಮಠ ಪ್ರಮುಖರಾದ ಎಸ್. ತಿಮ್ಮಣ್ಣ ಹಾಲಸಮುದ್ರ, ಅಯ್ಯಪ್ಪ ಉಪ್ಪಾರ, ಮಲ್ಲಯ್ಯಸ್ವಾಮಿ ಹಂಚಿನಾಳಮಠ, ಕಲ್ಯಾಣಪ್ಪ ಚಿನಿವಾಲ, ಮಲ್ಲಿಕಾರ್ಜುನ ಹಂಚಿನಾಳಮಠ, ಹಣವಾಳ ವೀರಯ್ಯ ಇತರ ಭಕ್ತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>