‘ಕೆಲ ದಿನಗಳ ಹಿಂದೆ ಆ ಸ್ಥಳವನ್ನು ಆರು ನಿವೇಶನಗಳನ್ನಾಗಿ ವಿಂಗಡಿಸಿಕೊಂಡು ಕೆಲವರು ಆಶ್ರಯ ಪಡೆದಿದ್ದರು. ಅದರಲ್ಲಿ ಒಂದು ನಿವೇಶನವನ್ನು ದಾನದ ರೂಪದಲ್ಲಿ ಮುಸ್ಲಿಮರಿಗೆ ನೀಡಲಾಗಿದೆ ಎಂದು ಆ ಸಮುದಾಯದವರು ವಾದಿಸುತ್ತಿದ್ದಾರೆ. ಆದರೆ, ದಾಖ ಲೆಗಳನ್ನು ಪರಿಶೀಲಿಸಿದಾಗ, ಇದು ಮುಸ್ಲಿಂ ಸಮುದಾಯಕ್ಕೆ ವರ್ಗಾವಣೆಯಾಗಿಲ್ಲ. ನಗರಸಭೆಯ ಸುಪರ್ದಿಯಲ್ಲೇ ಇದೆ’ ಎಂದು ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.