<p><strong>ಕೊಪ್ಪಳ</strong>: ನಗರದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದ್ದು, ಜನರಲ್ಲಿ ಆತಂಕ ಮೂಡಿದೆ.</p><p>ನಗರದ ಕಿನ್ನಾಳ ರಸ್ತೆಯ ಎಫ್. ಸಿ.ಐ ಗೋದಾಮಿನ ಎದುರು ಇರುವ ಉಲ್ಲಾಸ್ ವೆಂಕಟೇಶ ರಾಯ್ಕರ್ ಅವರ ಮನೆ ಸೇರಿದಂತೆ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.</p><p>ಉಲ್ಲಾಸ ಅವರ ಮನೆಯಲ್ಲಿ ಸುಮಾರು 50 ತೊಲೆ ಚಿನ್ನಾಭರಣ, ನಾಲ್ಕು ಕೆ, ಜಿ ಬೆಳ್ಳಿ ಹಾಗೂ ₹50 ಸಾವಿರ ನಗದು ಕಳ್ಳತನವಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p><p>ಉಲ್ಲಾಸ ಅವರು ಇತ್ತೀಚೆಗೆ ಚಿನ್ನಾಭರಣದ ಅಂಗಡಿ ಪ್ರಾರಂಭಿಸಿದ್ದರು. ಹೊಸ ಅಂಗಡಿಯಲ್ಲಿ ಲಾಕರ್ ಇರದ ಕಾರಣ ಮನೆಯಲ್ಲಿ ಬಂಗಾರ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಇರಿಸಿದ್ದರು. ಅವರು ಊರಿಗೆ ತೆರಳಿದ್ದಾಗ ಘಟನೆ ನಡೆದಿದೆ.</p><p>ನಗರ ಠಾಣೆಯ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿನ ಬಸವ ನಗರದಲ್ಲಿ ಎರಡು ದಿನಗಳ ಹಿಂದೆಯೂ ಘಟನೆ ನಡೆದಿದ್ದು ಹತ್ತು ತೊಲೆ ಚಿನ್ನಾಭರಣ ಹಾಗೂ ₹25 ಸಾವಿರ ನಗದು ಕಳುವಾಗಿತ್ತು. ರಾಯರ ಮಠದ ಸುತ್ತಲಿನ ಮನೆಯಲ್ಲಿ ಶನಿವಾರ ಕಳ್ಳತನವಾಗಿದೆ. ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿರುವ ಕಾರಣ ಜನ ಆತಂಕಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ನಗರದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದ್ದು, ಜನರಲ್ಲಿ ಆತಂಕ ಮೂಡಿದೆ.</p><p>ನಗರದ ಕಿನ್ನಾಳ ರಸ್ತೆಯ ಎಫ್. ಸಿ.ಐ ಗೋದಾಮಿನ ಎದುರು ಇರುವ ಉಲ್ಲಾಸ್ ವೆಂಕಟೇಶ ರಾಯ್ಕರ್ ಅವರ ಮನೆ ಸೇರಿದಂತೆ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.</p><p>ಉಲ್ಲಾಸ ಅವರ ಮನೆಯಲ್ಲಿ ಸುಮಾರು 50 ತೊಲೆ ಚಿನ್ನಾಭರಣ, ನಾಲ್ಕು ಕೆ, ಜಿ ಬೆಳ್ಳಿ ಹಾಗೂ ₹50 ಸಾವಿರ ನಗದು ಕಳ್ಳತನವಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p><p>ಉಲ್ಲಾಸ ಅವರು ಇತ್ತೀಚೆಗೆ ಚಿನ್ನಾಭರಣದ ಅಂಗಡಿ ಪ್ರಾರಂಭಿಸಿದ್ದರು. ಹೊಸ ಅಂಗಡಿಯಲ್ಲಿ ಲಾಕರ್ ಇರದ ಕಾರಣ ಮನೆಯಲ್ಲಿ ಬಂಗಾರ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಇರಿಸಿದ್ದರು. ಅವರು ಊರಿಗೆ ತೆರಳಿದ್ದಾಗ ಘಟನೆ ನಡೆದಿದೆ.</p><p>ನಗರ ಠಾಣೆಯ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿನ ಬಸವ ನಗರದಲ್ಲಿ ಎರಡು ದಿನಗಳ ಹಿಂದೆಯೂ ಘಟನೆ ನಡೆದಿದ್ದು ಹತ್ತು ತೊಲೆ ಚಿನ್ನಾಭರಣ ಹಾಗೂ ₹25 ಸಾವಿರ ನಗದು ಕಳುವಾಗಿತ್ತು. ರಾಯರ ಮಠದ ಸುತ್ತಲಿನ ಮನೆಯಲ್ಲಿ ಶನಿವಾರ ಕಳ್ಳತನವಾಗಿದೆ. ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿರುವ ಕಾರಣ ಜನ ಆತಂಕಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>