<p><strong>ಕುಕನೂರು</strong>: ಪಟ್ಟಣದ 19ನೇ ವಾರ್ಡ್ನ ಗುದ್ನೆಪ್ಪನ ಮಠದ ವೃತ್ತದಲ್ಲಿ ಅಂಟಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಪೋಸ್ಟರ್ ಸೋಮವಾರ ರಾತ್ರಿಯಲ್ಲಿ ಕೆಲ ಕಿಡಗೇಡಿಗಳು ಹರಿದು ಅವಮಾನಿಸಿದ್ದಾರೆ.</p>.<p>ಇದನ್ನು ಗಮನಿಸಿದ ಬಂಜಾರ ಸಮಾಜದ ಮುಖಂಡರು ನೂರಾರು ಜನ ಜಮಾಯಿಸಿದ್ದರು.</p>.<p>ಪರಿಸ್ಥಿತಿ ಗಂಭೀರತೆಯನ್ನು ಅರಿತ ಸಿಪಿಐ ಮೌನೇಶ್ ಪಾಟೀಲ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದಾರೆ. ಬಳಿಕ ಸಮಾಜದ ಮುಖಂಡರೊಂದಿಗೆ ಮಾತನಾಡಿ,‘ಕೃತ್ಯವನ್ನು ವಿಕೃತ ಮನಸ್ಸುಳ್ಳವರು ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ಕಿಡಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.</p>.<p>ಮುಖಂಡ ಸುರೇಶ್ ಬಳೂಟಗಿ ಮಾತನಾಡಿ,‘ತಪ್ಪಿತಸ್ಥರನ್ನು ಹುಡುಕಿ ತಕ್ಕ ಶಿಕ್ಷೆ ನೀಡಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದರು.</p>.<p>ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.</p>.<p>ಈ ವೇಳೆ ಮೇಘರಾಜ್ ಬಳಗೇರಿ, ಹಂಪಣ್ಣ ಕಟ್ಟಿಮನಿ, ಕುಮಾರ್ ಬಳಗೇರಿ, ಜಿತು ನಾಯಕ್, ಯಮನೂರ ಭಾನಪೂರ್, ಪ್ರಕಾಶ್ ಬಳಗೇರಿ, ಮಹೇಶ್ ಕಾರಭಾರಿ, ತಿರುಪತಿ ತಲ್ಲೂರು, ಕಿರಣ್ ರಾಥೋಡ್, ನಾಗರಾಜ್ ಭಾನಾಪುರ್, ಸೋಮಪ್ಪ ಚಿಕೇನಕೊಪ್ಪ, ಅರ್ಜುನ್ ಕಾರಭಾರಿ, ದುರ್ಗೇಶ್ ಕಟ್ಟಿಮನಿ, ಹನುಮಂತಪ್ಪ ಚವ್ಹಾಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು</strong>: ಪಟ್ಟಣದ 19ನೇ ವಾರ್ಡ್ನ ಗುದ್ನೆಪ್ಪನ ಮಠದ ವೃತ್ತದಲ್ಲಿ ಅಂಟಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಪೋಸ್ಟರ್ ಸೋಮವಾರ ರಾತ್ರಿಯಲ್ಲಿ ಕೆಲ ಕಿಡಗೇಡಿಗಳು ಹರಿದು ಅವಮಾನಿಸಿದ್ದಾರೆ.</p>.<p>ಇದನ್ನು ಗಮನಿಸಿದ ಬಂಜಾರ ಸಮಾಜದ ಮುಖಂಡರು ನೂರಾರು ಜನ ಜಮಾಯಿಸಿದ್ದರು.</p>.<p>ಪರಿಸ್ಥಿತಿ ಗಂಭೀರತೆಯನ್ನು ಅರಿತ ಸಿಪಿಐ ಮೌನೇಶ್ ಪಾಟೀಲ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದಾರೆ. ಬಳಿಕ ಸಮಾಜದ ಮುಖಂಡರೊಂದಿಗೆ ಮಾತನಾಡಿ,‘ಕೃತ್ಯವನ್ನು ವಿಕೃತ ಮನಸ್ಸುಳ್ಳವರು ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ಕಿಡಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.</p>.<p>ಮುಖಂಡ ಸುರೇಶ್ ಬಳೂಟಗಿ ಮಾತನಾಡಿ,‘ತಪ್ಪಿತಸ್ಥರನ್ನು ಹುಡುಕಿ ತಕ್ಕ ಶಿಕ್ಷೆ ನೀಡಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದರು.</p>.<p>ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.</p>.<p>ಈ ವೇಳೆ ಮೇಘರಾಜ್ ಬಳಗೇರಿ, ಹಂಪಣ್ಣ ಕಟ್ಟಿಮನಿ, ಕುಮಾರ್ ಬಳಗೇರಿ, ಜಿತು ನಾಯಕ್, ಯಮನೂರ ಭಾನಪೂರ್, ಪ್ರಕಾಶ್ ಬಳಗೇರಿ, ಮಹೇಶ್ ಕಾರಭಾರಿ, ತಿರುಪತಿ ತಲ್ಲೂರು, ಕಿರಣ್ ರಾಥೋಡ್, ನಾಗರಾಜ್ ಭಾನಾಪುರ್, ಸೋಮಪ್ಪ ಚಿಕೇನಕೊಪ್ಪ, ಅರ್ಜುನ್ ಕಾರಭಾರಿ, ದುರ್ಗೇಶ್ ಕಟ್ಟಿಮನಿ, ಹನುಮಂತಪ್ಪ ಚವ್ಹಾಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>