<p><strong>ಕೊಪ್ಪಳ</strong>: ಬುಧವಾರ ತಡರಾತ್ರಿ ಇಲ್ಲಿನ ರಾಯರ ಮಠದ ಆಸ್ತಿ ವಿಚಾರವಾಗಿ ನಡೆದ ವಾಗ್ವಾದದಿಂದಾಗಿ ಬೇಸರಗೊಂಡ ಸುಬುಧೇಂದ್ರ ಶ್ರೀಗಳು ಗುರುವಾರ ನಡೆಯಬೇಕಿದ್ದ ಪೂಜಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ವಾಪಸ್ ತೆರಳಿದರು.</p><p>ಗುರುವಾರ ರಾಯರ ಮಠದ ಮುಂಭಾಗಕ್ಕೆ ಬಂದ ಶ್ರೀಗಳು ಹೊರಗಿನಿಂದಲೇ ರಾಯರ ವೃಂದಾವನಕ್ಕೆ ಕೈ ಮುಗಿದು ವಾಪಸ್ ಹೋದರು.</p><p>ಶ್ರೀಗಳು ಗುರುವಾರ ಸಾಮೂಹಿಕ ಪಾದಪೂಜೆ, ಮೂಲರಾಮದೇವರ ಪೂಜೆ, ಹಸ್ತೋದಕ, ತೀರ್ಥಪ್ರಸಾದ ಮತ್ತು ಸಂಜೆ ತುಲಾಭಾರ ಕಾರ್ಯಕ್ರಮ ನಿಗದಿಯಾಗಿತ್ತು. ಇವುಗಳೆಲ್ಲವನ್ನೂ ಮೊಟಕುಗೊಳಿಸಲಾಯಿತು.</p><p>ವಾಪಸ್ ತೆರಳುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು ಬುಧವಾರ ರಾತ್ರಿ ಕೊಪ್ಪಳದ ರಾಯರ ಮಠದಲ್ಲಿ ಪ್ರವಚನ ನೀಡಿದ್ದೇನೆ. ಎಲ್ಲರಿಗೂ ಒಳಿತಾಗಲಿ ಎಂದರು.</p><p>ಕೊಪ್ಪಳದ ರಾಯರ ಮಠದಲ್ಲಿ ನಿಗದಿಯಾಗಿದ್ದ ಶ್ರೀಗಳ ಪೂಜಾ ಕಾರ್ಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ರಾಯರ ಮಠದಲ್ಲಿ ನಿಗದಿಯಾಗಿದೆ.</p><p>ಕೊಪ್ಪಳ ರಾಯರ ಮಠದ ವ್ಯವಸ್ಥಾಪಕ ಜಗನ್ನಾಥ ಹುನಗುಂದ ಪ್ರತಿಕ್ರಿಯೆ ನೀಡಿ ಇದು ಆಂತರಿಕ ವಿಚಾರವಾಗಿದ್ದು ನಾವು ಪರಿಹರಿಸಿಕೊಳ್ಳುತ್ತೇವೆ. ಮಂತ್ರಾಲಯದ ಶ್ರೀಗಳು ಮತ್ತೆ ಕೊಪ್ಪಳಕ್ಕೆ ಪೂಜೆ ಸಲ್ಲಿಸಬೇಕು ಎನ್ನುವುದು ನಮ್ಮ ಬಯಕೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಬುಧವಾರ ತಡರಾತ್ರಿ ಇಲ್ಲಿನ ರಾಯರ ಮಠದ ಆಸ್ತಿ ವಿಚಾರವಾಗಿ ನಡೆದ ವಾಗ್ವಾದದಿಂದಾಗಿ ಬೇಸರಗೊಂಡ ಸುಬುಧೇಂದ್ರ ಶ್ರೀಗಳು ಗುರುವಾರ ನಡೆಯಬೇಕಿದ್ದ ಪೂಜಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ವಾಪಸ್ ತೆರಳಿದರು.</p><p>ಗುರುವಾರ ರಾಯರ ಮಠದ ಮುಂಭಾಗಕ್ಕೆ ಬಂದ ಶ್ರೀಗಳು ಹೊರಗಿನಿಂದಲೇ ರಾಯರ ವೃಂದಾವನಕ್ಕೆ ಕೈ ಮುಗಿದು ವಾಪಸ್ ಹೋದರು.</p><p>ಶ್ರೀಗಳು ಗುರುವಾರ ಸಾಮೂಹಿಕ ಪಾದಪೂಜೆ, ಮೂಲರಾಮದೇವರ ಪೂಜೆ, ಹಸ್ತೋದಕ, ತೀರ್ಥಪ್ರಸಾದ ಮತ್ತು ಸಂಜೆ ತುಲಾಭಾರ ಕಾರ್ಯಕ್ರಮ ನಿಗದಿಯಾಗಿತ್ತು. ಇವುಗಳೆಲ್ಲವನ್ನೂ ಮೊಟಕುಗೊಳಿಸಲಾಯಿತು.</p><p>ವಾಪಸ್ ತೆರಳುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು ಬುಧವಾರ ರಾತ್ರಿ ಕೊಪ್ಪಳದ ರಾಯರ ಮಠದಲ್ಲಿ ಪ್ರವಚನ ನೀಡಿದ್ದೇನೆ. ಎಲ್ಲರಿಗೂ ಒಳಿತಾಗಲಿ ಎಂದರು.</p><p>ಕೊಪ್ಪಳದ ರಾಯರ ಮಠದಲ್ಲಿ ನಿಗದಿಯಾಗಿದ್ದ ಶ್ರೀಗಳ ಪೂಜಾ ಕಾರ್ಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ರಾಯರ ಮಠದಲ್ಲಿ ನಿಗದಿಯಾಗಿದೆ.</p><p>ಕೊಪ್ಪಳ ರಾಯರ ಮಠದ ವ್ಯವಸ್ಥಾಪಕ ಜಗನ್ನಾಥ ಹುನಗುಂದ ಪ್ರತಿಕ್ರಿಯೆ ನೀಡಿ ಇದು ಆಂತರಿಕ ವಿಚಾರವಾಗಿದ್ದು ನಾವು ಪರಿಹರಿಸಿಕೊಳ್ಳುತ್ತೇವೆ. ಮಂತ್ರಾಲಯದ ಶ್ರೀಗಳು ಮತ್ತೆ ಕೊಪ್ಪಳಕ್ಕೆ ಪೂಜೆ ಸಲ್ಲಿಸಬೇಕು ಎನ್ನುವುದು ನಮ್ಮ ಬಯಕೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>