<p><strong>ಕಾರಟಗಿ: ‘</strong>ಕೇಂದ್ರ, ರಾಜ್ಯ ಸರ್ಕಾರಗಳು ಪರಿಶಿಷ್ಟ ವರ್ಗದ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಬಗ್ಗೆ ಗ್ರಾಮೀಣ ಭಾಗದಲ್ಲೂ ತಿಳಿವಳಿಕೆ ಮೂಡಿಸಲಾಗುತ್ತಿದೆ. ಯೋಜನೆಗಳ ಸದುಪಯೋಗಕ್ಕೆ ಪರಿಶಿಷ್ಟ ವರ್ಗದ ಜನರು ಮುಂದಾಗಬೇಕು’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಪ್ರತಿನಿಧಿ ಟಿ. ಆಂಜನೇಯ ಹೇಳಿದರು.</p>.<p>ತಾಲ್ಲೂಕಿನ ಜೂಟರಟಗಿಯಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಲ್ಲಿ ಮಾತನಾಡಿದರು.</p>.<p>ಕೃಷಿ ಅಧಿಕಾರಿ ನಾಗರಾಜ, ಪರಿಶಿಷ್ಟ ವರ್ಗದ ಜನರಿಗೆ ಕೃಷಿ ಸಂಚಾಯಿ, ಕೃಷಿ ಹೊಂಡ, ಕೃಷಿ ಯಂತ್ರಧಾರೆ ಯೋಜನೆಯಡಿ ಶೇ90ರಷ್ಟು ಸಬ್ಸಿಡಿ ಇದೆ ಎಂದರು.</p>.<p>ಸಮುದಾಯ ಆರೋಗ್ಯ ಕೇಂದ್ರದ ಹನುಮಂತಪ್ಪ ಗುರಿಕಾರ ಮಾತನಾಡಿ, ಮಳೆಗಾಳದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತವೆ. ಲಕ್ಷಣ ಕಂಡುಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ, ಚಿಕಿತ್ಸೆಗೊಳಗಾಗಬೇಕು ಎಂದರು.</p>.<p>ಮರ್ಲಾನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ಹುಲಿಗೆಮ್ಮ ತಳವಾರ ಅಧ್ಯಕ್ಷತೆ ವಹಿಸಿದ್ದರು.<br /> ಗಂಗಾವತಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗ್ಯಾನನಗೌಡ, ಕಚೇರಿ ಅಧೀಕ್ಷಕ ರಮೇಶ, ಸಿಡಿಪಿಒ ಕಚೇರಿ ಸಹಿತ ವಿವಿಧ ಇಲಾಖೇಗಳ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ: ‘</strong>ಕೇಂದ್ರ, ರಾಜ್ಯ ಸರ್ಕಾರಗಳು ಪರಿಶಿಷ್ಟ ವರ್ಗದ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಬಗ್ಗೆ ಗ್ರಾಮೀಣ ಭಾಗದಲ್ಲೂ ತಿಳಿವಳಿಕೆ ಮೂಡಿಸಲಾಗುತ್ತಿದೆ. ಯೋಜನೆಗಳ ಸದುಪಯೋಗಕ್ಕೆ ಪರಿಶಿಷ್ಟ ವರ್ಗದ ಜನರು ಮುಂದಾಗಬೇಕು’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಪ್ರತಿನಿಧಿ ಟಿ. ಆಂಜನೇಯ ಹೇಳಿದರು.</p>.<p>ತಾಲ್ಲೂಕಿನ ಜೂಟರಟಗಿಯಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಲ್ಲಿ ಮಾತನಾಡಿದರು.</p>.<p>ಕೃಷಿ ಅಧಿಕಾರಿ ನಾಗರಾಜ, ಪರಿಶಿಷ್ಟ ವರ್ಗದ ಜನರಿಗೆ ಕೃಷಿ ಸಂಚಾಯಿ, ಕೃಷಿ ಹೊಂಡ, ಕೃಷಿ ಯಂತ್ರಧಾರೆ ಯೋಜನೆಯಡಿ ಶೇ90ರಷ್ಟು ಸಬ್ಸಿಡಿ ಇದೆ ಎಂದರು.</p>.<p>ಸಮುದಾಯ ಆರೋಗ್ಯ ಕೇಂದ್ರದ ಹನುಮಂತಪ್ಪ ಗುರಿಕಾರ ಮಾತನಾಡಿ, ಮಳೆಗಾಳದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತವೆ. ಲಕ್ಷಣ ಕಂಡುಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ, ಚಿಕಿತ್ಸೆಗೊಳಗಾಗಬೇಕು ಎಂದರು.</p>.<p>ಮರ್ಲಾನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ಹುಲಿಗೆಮ್ಮ ತಳವಾರ ಅಧ್ಯಕ್ಷತೆ ವಹಿಸಿದ್ದರು.<br /> ಗಂಗಾವತಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗ್ಯಾನನಗೌಡ, ಕಚೇರಿ ಅಧೀಕ್ಷಕ ರಮೇಶ, ಸಿಡಿಪಿಒ ಕಚೇರಿ ಸಹಿತ ವಿವಿಧ ಇಲಾಖೇಗಳ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>