<p>ಕಾರಟಗಿ: ಮನುಷ್ಯರ ಸ್ವಾರ್ಥದಿಂದ ಪರಿಸರ ನಾಶದಂಚಿನಲ್ಲಿದೆ. ಫಲವಾಗಿ ಗಾಳಿ, ನೀರು ಹಾಗೂ ಆಹಾರ ಕಲುಷಿತವಾಗಿ, ರೋಗಗಳಿಂದ ಬಳಲಬೇಕಾಗಿದೆ. ಇನ್ನಾದರೂ ಜಾಗೃತಗೊಂಡು ಪರಿಸರ ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ನಿಂಗಪ್ಪ ಡಿ. ಆಗಸರ್ ಹೇಳಿದರು.</p>.<p>ತಾಲ್ಲೂಕಿನ ಬೂದಗುಂಪಾದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಸಹಯೋಗದಲ್ಲಿ ಬುಧವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>ಆಶ್ರಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಸುಂಕದ ಮಾತನಾಡಿ,‘ಪರಿಸರ ಉಳಿಸುವ ಜೊತೆಗೆ ಬೆಳೆಸಬೇಕು. ಅದರೊಂದಿಗೆ ನಮ್ಮ ಅಳಿವು, ಉಳಿವು ಇದೆ ಎಂದರು.</p>.<p>ಶಿಕ್ಷಕಿ ನಿರ್ಮಲಾ, ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ ಮಾತನಾಡಿದರು.</p>.<p>ಶಿಕ್ಷಕರಾದ ಪ್ರಶಾಂತ ಜೋಷಿ, ಶೀಲಾ, ಮಂಜುಳಾ, ಸುನೀತಾ, ಸಚಿನ್, ರಾಜೇಶ್ವರಿ, ರೇಖಾ, ಮುಬಿನ, ವಿಧ್ಯಾರ್ಥಿಗಳು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರಟಗಿ: ಮನುಷ್ಯರ ಸ್ವಾರ್ಥದಿಂದ ಪರಿಸರ ನಾಶದಂಚಿನಲ್ಲಿದೆ. ಫಲವಾಗಿ ಗಾಳಿ, ನೀರು ಹಾಗೂ ಆಹಾರ ಕಲುಷಿತವಾಗಿ, ರೋಗಗಳಿಂದ ಬಳಲಬೇಕಾಗಿದೆ. ಇನ್ನಾದರೂ ಜಾಗೃತಗೊಂಡು ಪರಿಸರ ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ನಿಂಗಪ್ಪ ಡಿ. ಆಗಸರ್ ಹೇಳಿದರು.</p>.<p>ತಾಲ್ಲೂಕಿನ ಬೂದಗುಂಪಾದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಸಹಯೋಗದಲ್ಲಿ ಬುಧವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.</p>.<p>ಆಶ್ರಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಸುಂಕದ ಮಾತನಾಡಿ,‘ಪರಿಸರ ಉಳಿಸುವ ಜೊತೆಗೆ ಬೆಳೆಸಬೇಕು. ಅದರೊಂದಿಗೆ ನಮ್ಮ ಅಳಿವು, ಉಳಿವು ಇದೆ ಎಂದರು.</p>.<p>ಶಿಕ್ಷಕಿ ನಿರ್ಮಲಾ, ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ ಮಾತನಾಡಿದರು.</p>.<p>ಶಿಕ್ಷಕರಾದ ಪ್ರಶಾಂತ ಜೋಷಿ, ಶೀಲಾ, ಮಂಜುಳಾ, ಸುನೀತಾ, ಸಚಿನ್, ರಾಜೇಶ್ವರಿ, ರೇಖಾ, ಮುಬಿನ, ವಿಧ್ಯಾರ್ಥಿಗಳು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>