ಅಗ್ನಿ ಅವಘಡದಲ್ಲಿ ಸಾಕಷ್ಟು ನಷ್ಟವಾದ ಕಾರಣ ಅಂಗಡಿಗಳ ಮಾಲೀಕರು ಕಣ್ಣೀರಿಟ್ಟರು. ತಮ್ಮ ಕಣ್ಣೆದುರು ಸಾಮಗ್ರಿ ಸುಟ್ಟು ಕರಕಲಾಗುತ್ತಿದ್ದರೂ ನೋಡಿಕೊಂಡು ಅಸಹಾಯಕರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಣ್ಣೀರು ಹಾಕುತ್ತಿದ್ದವರನ್ನು ಸ್ನೇಹಿತರು ಸಮಾಧಾನ ಪಡಿಸುತ್ತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಪೂರ್ಣ ಬೆಂಕಿ ಹಾಗೂ ದಟ್ಟ ಹೊಗೆ ನಿಲ್ಲಿಸುವ ತನಕ ಕಾರ್ಯಾಚರಣೆ ನಡೆಸಿದಾಗ ರಾತ್ರಿ ಆಗಿತ್ತು. ಹಾನಿಯ ಪ್ರಮಾಣ ಎಷ್ಟು ಎನ್ನುವುದು ಖಚಿತವಾಗಿಲ್ಲ.