ಬೆಳಿಗ್ಗೆ 7.47 ನಿಮಿಷಕ್ಕೆ ಸರಿಯಾಗಿ ಸಾವಿರಾರು ಜನ ಔಷಧಿ ಸೇವಿಸಿದರು. ಬೆಳಿಗ್ಗೆ ಬೇಗನೆ ಮಳೆ ನಕ್ಷತ್ರವಿದ್ದ ಕಾರಣ ಶುಕ್ರವಾರ ರಾತ್ರಿಯಿಂದಲೇ ರಾಜ್ಯದ ವಿವಿಧ ಜಿಲ್ಲೆಗಳು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಜನ ಬಂದಿದ್ದರು. ಮುಹೂರ್ತ ಸಮಯಕ್ಕೆ ಮೂರು ತಾಸು ಮೊದಲೇ ಔಷಧ ವಿತರಣೆ ಆರಂಭವಾಯಿತು. ಮಳೆ ನಕ್ಷತ್ರ ಕೂಡುವ ಸಮಯವಾಗುತ್ತಿದ್ದಂತೆ ಗಂಟೆ ಬಾರಿಸಲಾಯಿತು. ಆಗ ಎಲ್ಲರೂ ಔಷಧ ಸೇವಿಸಿದರು.