ಮನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಈ ಮೂಲಕ ಶಾಲೆಗಳ ಬಲವರ್ಧನೆಗೆ ಕ್ರಮ ವಹಿಸಲಾಗಿದೆ.
ರಾಹುಲ್ ರತ್ನಂ ಪಾಂಡೆಯ ಜಿಲ್ಲಾ ಪಂಚಾಯಿತಿ ಸಿಇಒ ಕೊಪ್ಪಳ
ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ನಮ್ಮ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿದ್ದು ಖುಷಿ ನೀಡಿದೆ. ಶಾಲೆ ಸುತ್ತಲಿನ ವಾತಾವರಣವೂ ಆರೋಗ್ಯಕರವಾಗಿದೆ.
-ಅರ್ಪಿತಾ ಪೂಜಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಕನಕಾಪುರ
ಮಕ್ಕಳನ್ನು ಸೆಳೆಯುತ್ತಿರುವ ಚಿತ್ರಗಳು
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಗೋಡೆ ಮೇಲೆ ಬರೆಯಲಾಗುತ್ತಿರುವ ಸಾಮಾಜಿಕ ಜಾಗೃತಿಯ ಸಂದೇಶಗಳ ಚಿತ್ರಗಳು ಗಮನ ಸೆಳೆಯುವಂತಿವೆ. ಶೌಚಾಲಯ ಬಳಕೆಯ ಮಹತ್ವ ಕೋತಿಗಳ ಚಿನ್ನಾಟ ಪರಿಸರ ಮರಗಳು ತರಹೇವಾರಿ ಬಣ್ಣಗಳು ಮಕ್ಕಳನ್ನು ಆಕರ್ಷಿಸುತ್ತಿವೆ.