ಶೆಡ್ನಲ್ಲಿ ಯಂತ್ರದ ಸಹಾಯದಿಂದ ಕಬ್ಬಿಣದ ಸ್ಥಳಾಂತರಿಸಲಾಯಿತು
ಘಟನೆ ನಡೆದ ಮರುದಿನದಿಂದಲೇ ಶರವೇಗದಲ್ಲಿ ಗೇಟ್ ತಯಾರಿಸಲು ನಮ್ಮ ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಕೆಲಸ ಮುಗಿಯುವ ವಿಶ್ವಾಸವಿದೆ.
ಆಶ್ರಫ್ ಖಲೀಮ್ ಹಿಂದೂಸ್ತಾನ್ ಕಂಪನಿ ವ್ಯವಸ್ಥಾಪಕ
ಗೇಟ್ ಅಳವಡಿಕೆಗೆ ಎರಡು ಸೂತ್ರ
ಕೊಪ್ಪಳ: ‘ಜಲಾಶಯದಲ್ಲಿನ ನೀರು ಸಾಧ್ಯವಾದಷ್ಟು ಮಟ್ಟಿಗೆ ಉಳಿಸಲು ಪ್ರಯತ್ನ ನಡೆಯುತ್ತಿದ್ದು ನೀರಿನೊಳಗೆ ಪ್ಲೇಟ್ ಇಳಿಸಲು ನಿರ್ಧರಿಸಲಾಗಿದೆ. ನೀರಿನೊಳಗೆ ತೆರಳಿ ಕೆಲಸ ಮಾಡುವ ಅನುಭವಿಗಳ ತಂಡ ಬರಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ‘ಎಂಜಿನಿಯರ್ಗಳು ಮತ್ತು ಗೇಟ್ ಅಳವಡಿಕೆ ತಜ್ಞರ ಒಂದು ತಂಡ ನೀರು ಕಡಿಮೆಯಾದ ಬಳಿಕ ಗೇಟ್ ಅಳವಡಿಸುವ ಸಲಹೆ ನೀಡಿದ್ದು ಜೆಎಸ್ಡಬ್ಲ್ಯು ಕಂಪನಿಯ ತಂಡ ನೀರು ಖಾಲಿಯಾಗದಂತೆ ನೀರಿನೊಳಗೆ ಕೆಲಸ ಮಾಡುವ ಬಗ್ಗೆ ಸಲಹೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಮುಂದೆ ಈಗ ಎರಡು ಸೂತ್ರಗಳು ಇವೆ’ ಎಂದರು. ‘ಗೇಟ್ ತಜ್ಞ ಹೈದರಾಬಾದ್ನ ಕನ್ನಯ್ಯನಾಯ್ಡು ಅವರು ವಿನ್ಯಾಸ ಕಳುಹಿಸಿದ್ದು ಅದರಂತೆ ಸ್ಥಳೀಯವಾಗಿ ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದೂಸ್ತಾನ್ ಸಂಸ್ಥೆಗಳು ಪ್ಲೇಟ್ ಸಿದ್ಧಪಡಿಸುತ್ತಿವೆ’ ಎಂದು ಹೇಳಿದರು.