<p><strong>ಕುಷ್ಟಗಿ (ಕೊಪ್ಪಳ ಜಿಲ್ಲೆ):</strong> ‘ಬೆಳೆ ವಿಫಲವಾದರೆ ರೈತ ಹತಾಶನಾಗುವುದಿಲ್ಲ. ಮುಂದೆ ಒಳ್ಳೆಯ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಬೀಜಬಿತ್ತಿ ಪ್ರಯತ್ನಿಸುತ್ತಲೇ ಹೋಗುತ್ತಾನೆ. ಹಾಗೆಯೇ, ಒಂದು ಬಾರಿ ಓದಿನಲ್ಲಿ ಹಿನ್ನಡೆಯಾದರೂ ಮರಳಿ ಯತ್ನ ಮಾಡು ಎಂದೆ ತಂದೆ– ತಾಯಿ ನೈತಿಕ ಸ್ಥೈರ್ಯ ತುಂಬಿದ್ದರಿಂದಲೇ ನನಗೆ ಈ ಸಾಧನೆ ಸಾಧ್ಯವಾಯಿತು’.</p>.<p>ಯುಪಿಎಸ್ಸಿ ಪರೀಕ್ಷೆಯಲ್ಲಿ 646ನೇ ರ್ಯಾಂಕ್ ಪಡೆದಿರುವ ತಾಲ್ಲೂಕಿನ ಕಂದಕೂರು ಗ್ರಾಮದ ರಮೇಶ ಗುಮಗೇರಿ ಹೇಳಿದ ಮಾತಿದು.</p>.<p>ಇವರದು ಬಡ ರೈತ ಕುಟುಂಬ.ತಂದೆ ಯಮನಪ್ಪ ಗುಮಗೇರಿ ಹಾಗೂ ತಾಯಿ ಹುಲಿಗೆಮ್ಮ ಅಕ್ಷರ ಕಲಿತಿಲ್ಲ.</p>.<p>‘2018ರ ಮುಖ್ಯ ಪರೀಕ್ಷೆಯಲ್ಲಿ ಕೇವಲ 2 ಅಂಕಗಳಲ್ಲಿ ಅವಕಾಶ ಕೈತಪ್ಪಿತು. ಕುಟುಂಬದವರು ಮತ್ತು ಸ್ನೇಹಿತರು ಪ್ರೋತ್ಸಾಹಿಸಿದ್ದರಿಂದ ಈ ಬಾರಿ ಯಶಸ್ಸು ಸಿಕ್ಕಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿತೆ. ಬಾಗಲಕೋಟೆಯಲ್ಲಿ ಎಂಜಿನಿಯರಿಂಗ್, ಸೂರತ್ಕಲ್ದಲ್ಲಿ ಎಂ.ಟೆಕ್ ಪದವಿ ಪಡೆದಿದ್ದೇನೆ’ ಎಂದು ರಮೇಶ ಹೇಳಿದರು.</p>.<p>‘ಸಾಮಾಜಿಕ ಅನಿಷ್ಟಪದ್ಧತಿಗಳನ್ನು ಹೋಗಲಾಡಿಸುವ, ಬಡವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಅಭಿಲಾಷೆ ನನ್ನದು’ ಎನ್ನುತ್ತಾರೆ ಅವರು.</p>.<p>‘ನೋವು–ಸಂಕಷ್ಟದ ಅರಿವು ರಮೇಶನಿಗೆ ಇದೆ.ಬಡವರಿಗೆ ನೆರವಾಗುತ್ತಾನೆ’ ಎಂದು ಯಮನಪ್ಪ ಗಮಗೇರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ (ಕೊಪ್ಪಳ ಜಿಲ್ಲೆ):</strong> ‘ಬೆಳೆ ವಿಫಲವಾದರೆ ರೈತ ಹತಾಶನಾಗುವುದಿಲ್ಲ. ಮುಂದೆ ಒಳ್ಳೆಯ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಬೀಜಬಿತ್ತಿ ಪ್ರಯತ್ನಿಸುತ್ತಲೇ ಹೋಗುತ್ತಾನೆ. ಹಾಗೆಯೇ, ಒಂದು ಬಾರಿ ಓದಿನಲ್ಲಿ ಹಿನ್ನಡೆಯಾದರೂ ಮರಳಿ ಯತ್ನ ಮಾಡು ಎಂದೆ ತಂದೆ– ತಾಯಿ ನೈತಿಕ ಸ್ಥೈರ್ಯ ತುಂಬಿದ್ದರಿಂದಲೇ ನನಗೆ ಈ ಸಾಧನೆ ಸಾಧ್ಯವಾಯಿತು’.</p>.<p>ಯುಪಿಎಸ್ಸಿ ಪರೀಕ್ಷೆಯಲ್ಲಿ 646ನೇ ರ್ಯಾಂಕ್ ಪಡೆದಿರುವ ತಾಲ್ಲೂಕಿನ ಕಂದಕೂರು ಗ್ರಾಮದ ರಮೇಶ ಗುಮಗೇರಿ ಹೇಳಿದ ಮಾತಿದು.</p>.<p>ಇವರದು ಬಡ ರೈತ ಕುಟುಂಬ.ತಂದೆ ಯಮನಪ್ಪ ಗುಮಗೇರಿ ಹಾಗೂ ತಾಯಿ ಹುಲಿಗೆಮ್ಮ ಅಕ್ಷರ ಕಲಿತಿಲ್ಲ.</p>.<p>‘2018ರ ಮುಖ್ಯ ಪರೀಕ್ಷೆಯಲ್ಲಿ ಕೇವಲ 2 ಅಂಕಗಳಲ್ಲಿ ಅವಕಾಶ ಕೈತಪ್ಪಿತು. ಕುಟುಂಬದವರು ಮತ್ತು ಸ್ನೇಹಿತರು ಪ್ರೋತ್ಸಾಹಿಸಿದ್ದರಿಂದ ಈ ಬಾರಿ ಯಶಸ್ಸು ಸಿಕ್ಕಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿತೆ. ಬಾಗಲಕೋಟೆಯಲ್ಲಿ ಎಂಜಿನಿಯರಿಂಗ್, ಸೂರತ್ಕಲ್ದಲ್ಲಿ ಎಂ.ಟೆಕ್ ಪದವಿ ಪಡೆದಿದ್ದೇನೆ’ ಎಂದು ರಮೇಶ ಹೇಳಿದರು.</p>.<p>‘ಸಾಮಾಜಿಕ ಅನಿಷ್ಟಪದ್ಧತಿಗಳನ್ನು ಹೋಗಲಾಡಿಸುವ, ಬಡವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಅಭಿಲಾಷೆ ನನ್ನದು’ ಎನ್ನುತ್ತಾರೆ ಅವರು.</p>.<p>‘ನೋವು–ಸಂಕಷ್ಟದ ಅರಿವು ರಮೇಶನಿಗೆ ಇದೆ.ಬಡವರಿಗೆ ನೆರವಾಗುತ್ತಾನೆ’ ಎಂದು ಯಮನಪ್ಪ ಗಮಗೇರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>